ಹಿರಿಯೂರು :
ನಗರದಲ್ಲಿನ ಆಜಾದ್ ನಗರ ವಾಡ೯ ನ೦ಬರ್ 06 ರಲ್ಲಿ ಶಂಷುನ್ನೀಸಾ ಮೊಮ್ಮಗಳನ್ನು ಮಕ್ಕಳ ಕಳ್ಳಿ ಎತ್ತಿಕೊಂಡು ಹೋಗಿ ಚೀಲದಲ್ಲಿ ಹಾಕುತ್ತಿದ್ದಳು, ಇದನ್ನು ನೋಡಿದ ಬಡಾವಣೆ ಜನರು ಮಕ್ಕಳ ಕಳ್ಳಿಯನ್ನು ಹಿಡಿದು, ತಳಿಸುವ ಮೂಲಕ ಮಕ್ಕಳ ಕಳ್ಳಿಯ ಕೈಯಿಂದ ಮಗುವನ್ನು ರಕ್ಷಿಸಿದ್ದಾರೆ.
ಬಡಾವಣೆಯ ಜನರು ಮಕ್ಕಳಕಳ್ಳಿಯನ್ನು ಹಿಡಿದು ಇದೀಗ ನಗರದ ಪೋಲೀಸ್ ಠಾಣೆಗೆ ಒಪ್ಪಿಸಿದ್ದಾರೆ, ಈ ಮಕ್ಕಳ ಕಳ್ಳಿಯ ಹಿಂದೆ ಎಷ್ಟು ಜನ ಇದ್ದಾರೆ, ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆದ್ದರಿಂದ ಸಾರ್ವಜನಿಕರು ಜಾಗರೂಕರಾಗುವ ಮೂಲಕ ನಿಮ್ಮ ಮನೆಯ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂಬುದಾಗಿ “ಹಿರಿಯೂರು ನ್ಯೂಸ್” ತಂಡ ಎಚ್ಚರಿಕೆ ನೀಡಿದೆ.

About The Author
Discover more from JANADHWANI NEWS
Subscribe to get the latest posts sent to your email.