ಹೊಸದುರ್ಗ: ಪ್ರತಿ ವರ್ಷದಂತೆ ಈ ವರ್ಷವೂ ಸಹಾ ತಾಲೂಕಿನಾಧ್ಯಂತ ಜಾನುವಾರುಗಳ ಗಣತಿ ನಡೆಯಲಿದ್ದು ಈ ಗಣತಿ ಕಾರ್ಯಕ್ರಮಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಪಟ್ಟಣದ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿ ೨೧ನೇ ಜಾನುವಾರು ಗಣತಿಯ ಪೋಸ್ಟರ್ಸ್ ಬಿಡುಗಡೆ ಮಾಡಿದರು.
ಈ ಸಂಧರ್ಬದಲ್ಲಿ ಮಾತನಾಡಿದ ಪಶು ಇಲಾಖೆಯ ಸಹಾಯಕ ನಿರ್ಧೇಶಕ ಡಾ: ಕಿರಣ್ ಜಾನುವಾರು ಗಣತಿಯಲ್ಲಿ ಪ್ರತಿಯೊಂದು ಮನೆ,ಉದ್ಯಮ,ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುವುದು. ಗಣತಿಯಲ್ಲಿ ಸಾಕು ಪ್ರಾಣಿಗಳು , ಕುಕ್ಕುಟಗಳು, ಹಾಗೂ ಬೀದಿ ನಾಯಿಗಳು ಮತ್ತು ಬೀದಿ ದನಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು,ಎಲ್ಲಾ ಮಾಹಿತಿಯನ್ನು ಮೊಬೈಲ್ ಆ್ಯಫ್ ಮುಖಾಂತರ ಸಂಗ್ರಹಿಸಲಾಗುವುದು ಎಂದು ತಿಳಿಸಿದ ಅವರು ಜಾನುವಾರು ಗಣತಿಯ ಸಮಗ್ರ ಮಾಹಿತಿಂ ಸರ್ಕಾರವು ಪಶು ಸಂಗೋಪನೆ ಯೋಜನೆಗಳನ್ನು ರೂಪಿಸಲು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
About The Author
Discover more from JANADHWANI NEWS
Subscribe to get the latest posts sent to your email.