ಚಳ್ಳಕೆರೆ ಡು.9
ನಗರದಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಸಿ.ಸಿ ಕ್ಯಾಮರ ಅಳವಡಿಸುವಂತೆ ಒತ್ತಾಯಿಸಿ ಯುವನೊಬ್ಬ ಏಕಾಂಗಿಯಾಗಿ ನಗರಸಭೆ ಮುಂಭಾಗ ಪ್ರತಿಭಟನೆ ಮಾಡಲು ಮುಂದಾಗಿದ್ದಾನೆ.
ನಗರದ ಕೃಷ್ಣೇಗೌಡ ಎಂಬ ಯುವಕ ಪ್ರತಿಭಟನೆ ಮಾಡುವ ಮೂಲಕ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿರುವ ಸಿಸಿ ಕ್ಯಾಮಗಳು ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದರೂ ದುರಸ್ಥಿ ಕಾಣದೆ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಸರಗಳ್ಳತನ. ಮನೆ ದರೋಡೆ. ದ್ವಿಚಕ್ರವಾಹನ ಕಳವು ಪ್ರಕರಣಗಳು ಹೆಚ್ಚಾಗಿ ಅಪರಾದ ಕೃತ್ಯ ಮಾಡಿದವರನ್ನು ಪತ್ತೆ ಮಾಡಲು ಸಮಸ್ಯೆಯಾಗಿದ್ದು ನಗರಸಭೆ ವ್ಯಾಪ್ತಿ ಸಿ.ಸಿ ಕ್ಯಾಮರ ಅಳವಡಿಸುವಂತೆ ಏಕಾಂಗಿಯಾಗಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆಗೆ ಮಾಡಲು ಮುಂದಾಗಿದ್ದಾನೆ ಏಕ ವ್ಯಕ್ತಿ ಪ್ರತಿಭಟನೆಗೆ ಯಾವುದೇ ಅಹಿತರ ಘಟನೆ ನಡೆಯದಂತೆ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಏಕಾಂಗಿ ಪ್ರತಿಭಟನೆಗೆ ಸಿ.ಸಿ.ಕ್ಯಾಮರ ಅಳವಡಿಸಲು ನಗರಸಭೆ ಹಾಗೂ ಪೋಲಿಸ್ ಇಲಾಖೆ ಮುಂದಾಗುವರೇ ಕಾದು ನೋಡ ಬೇಕಿದೆ.

About The Author
Discover more from JANADHWANI NEWS
Subscribe to get the latest posts sent to your email.