.
ವರದಿ-ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ-: ಪಟ್ಟಣದ ಶ್ರೀಚನ್ನಕೇಶವ ಸ್ವಾಮಿ ದೇವರ ಉತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.











ಕುರುಬ ಜನಾಂಗದ ಆರಾಧ್ಯದೈವ ಚನ್ನಕೇಶವ ಸ್ವಾಮಿ ದೇವರ ಉತ್ಸವದ ಅಂಗವಾಗಿ ಚನ್ನಕೇಶವ ದೇವಾಲಯದಿಂದ ರಂಗನಾಥ ಸ್ವಾಮಿ (ಮರಡಿ ರಂಗನಾಥ) ದೇವಾಲಯದವರೆಗೆ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಯಿತು.
ಚೆನ್ನಕೇಶವ ದೇವರ ಕುಲ ದೇವರಾಗಿ ಹೊಂದಿರುವ
ಜಿಲ್ಲೆಯ ನೇರಲಗುಂಟೆ, ಗೌಡಗೆರೆ, ಕೊಂಡ್ಲಹಳ್ಳಿ ಕೋನಸಾಗರ ಸೇರಿದಂತೆ ಜಿಲ್ಲೆಯ ನಾನಾ ಗ್ರಾಮಗಳಿಂದ
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.
ಚನ್ನಕೇಶವ ಸ್ವಾಮಿ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿರಿಸಿ. ಪಟ್ಟಣದ ಪ್ರಮುಖ ತೇರುಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಭಾನುವಾರ ಮಧ್ಯಾಹ್ನ 3ಕ್ಕೆ ಚನ್ನಕೇಶವ ಸ್ವಾಮಿ ದೇವರ ಉತ್ಸವ ದೇವಾಲಯದಿಂದ ಹೊರಟ ಮೆರವಣಿಗೆ ತೇರು ಬೀದಿ ಮೂಲಕ ಮರಡಿ ರಂಗನಾಥ ಸ್ವಾಮಿ
ದೇವಾಲಯ ತಲುಪಿತು.
ಜಾನಪದ ಶೈಲಿಯ ವಾದ್ಯಗಳಾದ ಡೊಳ್ಳು ವಾದ್ಯಗಳು ಹಾಗೂ ಹರಿಕೆ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕುರಿ ಪ್ರದಕ್ಷಿಣೆ
ಪಲ್ಲಕ್ಕಿಯ ಸುತ್ತ ಕುರಿ ಮರಿಗಳನ್ನು ಪ್ರದಕ್ಷಿಣೆ ನಡೆಸುವುದು. ವಿಶಿಷ್ಟ ಆಚರಣೆ ಇಲ್ಲಿ ರೂಢಿಯಲ್ಲಿದೆ.
ಮೆರವಣಿಗೆ ಪಾದಗಟ್ಟೆ ಪ್ರದೇಶಕ್ಕೆ ಬಂದಾಗ ನೂರಾರು
ಕುರಿಗಳ ಹಿಂಡನ್ನು ಚನ್ನಕೇಶ್ವರ ಸ್ವಾಮಿ ಪಲ್ಲಕ್ಕಿಯ ಸುತ್ತ
ಪ್ರದಕ್ಷಿಣೆ ಮಾಡಿಸಲಾಯಿತು.
ಕುರಿಗಾಹಿಗಳು ಕುರಿಗಳನ್ನು ಒಂದಾದ ಎಳೆದು ತಂದು ಪಲ್ಲಕ್ಕಿ ಸುತ್ತ ಸುತ್ತಿಸಿದರು.
ಮೊದಲು ನಿಧಾನವಾಗಿ ಸುತ್ತಿದೆ ಕುರಿಗಳು ಎರಡು ಹಾಗೂ ಮೂರನೇ ಸುತ್ತಿನಲ್ಲಿ ವೇಗವಾಗಿ ಚಲಿಸಿದವು. ದೇವರ ಸುತ್ತ ಕುರಿಗಳು ಸರಾಗವಾಗಿ ಚಲಿಸಿದರೆ ಕುರಿಗಳಿಗೆ ದೇವರ ಆಶೀರ್ವಾದ ಲಭಿಸಿದಂತೆ ಎಂಬ ಭಾವನೆ ಕುರಿಗಾರರಲ್ಲಿದೆ ಎನ್ನುತ್ತಾರೆ ಕುರುಬ ಸಮುದಾಯದ ಹಿರಿಯರು,
ಇದೆ ವೇಳೆ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಕಾಳಪ್ಪ ಮಾತನಾಡಿದರು ಸುಮಾರು 500 ವರ್ಷಗಳ ಇತಿಹಾಸವುಳ್ಳ ಚನ್ನಕೇಶವ ದೇವಸ್ಥಾನ ನಮ್ಮ ಪೂರ್ವಜರ ಕಾಲದಿಂದಲೂ ಶ್ರೀ ಚನ್ನಕೇಶವ ಸ್ವಾಮಿಯ ಆರಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ ಅದರಂತೆ ನಾವು ಸಹ ಪ್ರತಿ ವರ್ಷ ಚನ್ನಕೇಶವ ಸ್ವಾಮಿ ದೇವಸ್ಥಾನದಿಂದ ಮರಡಿ ರಂಗನಾಥ ಸ್ವಾಮಿ ದೇವಸ್ಥಾನದವರೆಗೆ ಅದ್ದೂರಿ ಪಲ್ಲಕ್ಕಿ ಉತ್ಸವವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಕುರುಬ ಸಮಾಜದ ಮಾಜಿ ಅಧ್ಯಕ್ಷ ಕಂಠಪ್ಪರ ಮುನಿಯಪ್ಪ,
ಮಾತನಾಡಿ
ಆರು ಶತಮಾನಗಳ ಹಿಂದೆ
ಕುರುಬ ಮೂಲ ಸಂಸ್ಕೃತಿಯ ಪ್ರತೀಕರಾದ ಕುರಿಗಾಹಿಗಳು ಅನಂತಪುರ ಜಿಲ್ಲೆಯಿಂದ ಕುರಿಗಳನ್ನು ಮೇಯಿಸಿಕೊಂಡ ಹಳ್ಳ ದಾಟಿ ಬರುವ ಸಂದರ್ಭದಲ್ಲಿ ನಮ್ಮ ದೈವಿ ಸ್ತ್ರೀ ಒಬ್ಬಳು ನಾನು ಬರುತ್ತೇನೆ ಎನ್ನಲು ಈ ಸಂದರ್ಭದಲ್ಲಿ ನಮ್ಮ ಕುಲದ ಹೆಣ್ಣು ಮಕ್ಕಳು ಯಾರಿದು ನಾನು ಬರುತ್ತೇನೆ ಎಂದು ಹೇಳುತ್ತಿರುವರು ಎಂದು ಆಲೋಚಿಸಿ ಅದನ್ನು ಹಿರಿಯರಿಗೆ ತಿಳಿಸುತ್ತಾರೆ.
ಹಿರಿಯೂರು ಆ ಸ್ಥಳಕ್ಕೆ ಬಂದು ಆ ಸ್ತ್ರೀಯನು ಕರೆಯಲು ಆಕೆ ಬರಲಿಲ್ಲ ಆ ಸಂದರ್ಭದಲ್ಲಿ ರಾಮಬಾಣ ಬಂತು ಅದು ಸಾಮಾನ್ಯ ಬಾಣವೆಂದು ಭಾವಿಸಿ, ಅವುಗಳನ್ನು ಜೊತೆಗೆ ಕೊಂಡಯುತ್ತಾ ಕುರಿಗಳನ್ನು ಮೇಯಿಸಿಕೊಂಡು ನಾಯಕನಹಟ್ಟಿ ಕೆರೆಯಂಗಳಕ್ಕೆ ಬರಲು ಹಲ್ಲಿ ಕುರಿ ಹಟ್ಟಿಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಕಳ್ಳಿಯೊಂದಿಗೆ ಆ ಬಾಣವನ್ನು ಇಡಲಾಗುತ್ತದೆ ಈ ಸಂದರ್ಭದಲ್ಲಿ ದೈವ ಕೃಪೆಯಿಂದ ಕುರಿಹಟ್ಟಿಗೆ ಬೆಂಕಿ ಬೀಳಲು ಇಡೀ ಕುರಿಹಟ್ಟಿ ಬೆಂಕಿ ಕೆನ್ನಾಲಿಗಿಗೆ ಆಹುತಿಯಾಗಲು ಆ ಬಾಣಗಳು ಮಾತ್ರ ಹಾಗೆ ಯಥಾ ಸ್ಥಿತಿಯಲ್ಲಿರಲು ಇದರಿಂದ ದಿಗ್ಬಂದಿತರಾದ ಪೂರ್ವಜರು ಜ್ಯೋತಿಷ್ಯ ಕೇಳುತ್ತಾರೆ ಇದು ಸಾಮಾನ್ಯ ಬಾಣಗಳಲ್ಲ ದೈವ ಕೃಪೆ ಸಾಕ್ಷಾತ್ ತಿರುಪತಿ ತಿಮ್ಮಪ್ಪನೆ ಒಲಿದಿದ್ದಾನೆ ಗೌಡ್ರು ಕುರುಬರ ವಂಶಸ್ಥರಾದ ನೀವು ಇಲ್ಲಿ ದೇವಾಲಯವನ್ನು ನಿರ್ಮಿಸಿ ಪೂಜಿಸಿ ಎಂದು ನಮ್ಮ ಪೂರ್ವಜರು ಹಟ್ಟಿ ಮಲ್ಲಪ್ಪ ನಾಯಕ ಸಮಸ್ತಾನದಲ್ಲಿ ಜಾಗ ಪಡೆದು ದೇವಾಲಯ ನಿರ್ಮಿಸಿ ವರ್ಷಕ್ಕೊಮ್ಮೆ ದಸರಾ ಹಾಗೂ ದೀಪಾವಳಿಯಲ್ಲಿ ಪಲ್ಲಕ್ಕಿ ಉತ್ಸವ ಆಚರಿಸಿದ ಬರಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚೆನ್ನಕೇಶವ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಉಪಾಧ್ಯಕ್ಷ ಗುರುಸ್ವಾಮಿ, ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ, ನಿರ್ದೇಶಕರಾದ ಮಂಜುನಾಥ್, ಡ್ರೈವರ್ ತಿಪ್ಪೇಸ್ವಾಮಿ, ಸೋಮಶೇಖರ್, ಮಾಜಿ ಅಧ್ಯಕ್ಷ ಪಾಲಾಕ್ಷಿ, ನಾಗಣ್ಣ ಆರ್ ತಿಪ್ಪೇಸ್ವಾಮಿ, ಗೌಡಗೆರೆ ರಂಗನಾಥ್, ಸೇರಿದಂತೆ ಶ್ರೀ ಚನ್ನಕೇಶವ ಸ್ವಾಮಿ ದೈವಸ್ಥಾನ ಸಮಿತಿ ಹಾಗೂ ಭಕ್ತಾದಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.