ಹೊಸದುರ್ಗ: ಭಾರತ ಹುಣ್ಣುಮೆಯ ದಿನವಾದ ಫೆ ೧ ರಂದು ಭಾನುವಾರ ಪಟ್ಟಣದಲ್ಲಿ ನಡೆಯಲಿರುವ ಶ್ರೀ ವೀರ ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ಜ. ೧೦ ರಂದು ಶನಿವಾರ ಮದ್ಯಾಹ್ನ ೧೨ ಗಂಟೆಗೆ ಪಟ್ಟಣದ ಶ್ರೀ ಗುರು ಒಪ್ಪತ್ತಿನಸ್ವಾಮಿ ವಿರಕ್ತ ಮಠದಲ್ಲಿ ಜಯಂತಿ ಕಾರ್ಯಕ್ರಮವನ್ನ ರೂಪಿಸುವ ಸಲುವಾಗಿ ಪೂರ್ವಬಾವಿ ಸಭೆಯನ್ನ ಕರೆಯಲಾಗಿದೆ ಎಂದು ತಾಲೂಕು ಸಂಘದ ಅಧ್ಯಕ್ಷ ಲೋಕೇಶಪ್ಪ ತಿಳಿಸಿದ್ದಾರೆ. ಈ ಪೂರ್ವಬಾವಿ ಸಭೆಗೆ ತಾಲೂಕಿನ ಸಮಸ್ತ ಮಡಿವಾಳ ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಆಗಮಿಸಿ ಸಲಹೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.