ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧವಾದ ಶ್ರೀ ಭಾಷ್ಯಾಕಾರ ಸ್ವಾಮಿ ದೇವಸ್ಥಾನದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್.ವಿಶ್ವನಾಥ್ ರವರು ಹಾಗೂ ಮಾಜಿ ಸಚಿವರಾದ
ಸಾ.ರಾ.ಮಹೇಶ್ ರವರು ಜೊತೆಯಾಗಿ ಭೂಮಿ ಪೂಜೆ ನೆರವೇರಿಸಿದರು.



ಅಡಗೂರು ಹೆಚ್.ವಿಶ್ವನಾಥ್ ಅವರು ತಮ್ಮ ಶಾಸಕರ ಪ್ರದೇಶ ಅಭಿವೃದ್ಧಿ ಅನುದಾನದ ಅಡಿಯಲ್ಲಿ 10 ಲಕ್ಷ ರೂಗಳ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಮಾಡಲಾಗುತ್ತಿದೆ.
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸರ್ವರೂ ಕೈಜೋಡಿಸಬೇಕೆಂದ ಶಾಸಕರು ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನವು ಉತ್ತಮ ರೀತಿಯಲ್ಲಿ ನಿರ್ವಹಣೆ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯಾಗುವ ಮೂಲಕ ಪ್ರಮುಖ ಧಾರ್ಮಿಕ ಕ್ಷೇತ್ರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಮಿತ್ ವಿ.ದೇವರಹಟ್ಟಿ, ಮುಖಂಡರಾದ ಎಸ್.ಪಿ.ಆನಂದ್, ಎಸ್.ಕೆ.ಶ್ರೀನಿವಾಸ, ಎಸ್.ಆರ್.ರಾಮೇಗೌಡ, ಏಜಸ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಕೆ.ಮಧುಚಂದ್ರ,
ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಸೋಮಣ್ಣ, ವಿ ಎಸ್ ಎಸ್ ಬಿ ಎನ್ ಅಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ಪಾಪಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್.ವಿ.ನಟರಾಜ್,
ಎಸ್.ಆರ್.ಪ್ರಕಾಶ್,
ಬಿ.ಟಿ.ಮಹದೇವ್, ಮಾಜಿ ಉಪಾಧ್ಯಕ್ಷೆ ಸುಮ ಶಿವಕುಮಾರ್, ಸದಸ್ಯರಾದ ಶಕೀಲ್, ಗಂಗಾಧರ್, ಮರೀಗೌಡ, ನೀಲಮ್ಮ, ಮಾಜಿ ಸದಸ್ಯರಾದ ಅಯಾಜ್, ಅರುಣ್ ರಾಜ್, ಬಲರಾಮೇಗೌಡ, ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಮುಖಂಡರುಗಳಾದ ಸುನೀಲ್, ಗುಣಪಾಲ್ ಜೈನ್, ಭಾಸ್ಕರ, ಕೃಷ್ಣೇಗೌಡ, ಪ್ರೇಮಣ್ಣ, ಲಾಲು ಸಾಹೇಬ್, ಶ್ರೀನಿವಾಸ್, ಕುಮಾರ, ಸರ್ದಾರ್, ಜಯರಾಮ್, ಚಂದು, ರಘು, ಸಚಿನ್, ರಮೇಶ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.