January 29, 2026
IMG-20251008-WA0297.jpg

ಹಿರಿಯೂರು ಅ.8.ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು,ಮಾನವನು ತನ್ನ ಸ್ವಾರ್ಥಕ್ಕಾ\nಗಿ ಕಾಡಿಗೆ ಬೆಂಕಿ ಹಾಕಬಾರದು ಎಂದು
ವಲಯ ಅರಣ್ಯಾಧಿಕಾರಿ ಬಾಬು ಎಸ್ ಹೇಳಿದರು.

ಅರಣ್ಯ ಇಲಾಖೆವತಿಯಿಂದ 71 ವನ್ಯಜೀವಿ ಸಪ್ತಾಹದ ಅಂಗವಾಗಿ ನವೋದಯ ಶಾಲೆ,ಉಡುವಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಡು ಪ್ರಾಣಿಗಳ ಬೇಟೆಯಾಡುವುದು,ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದು ಇದರಿಂದ ಅರಣ್ಯ ನಾಶವಾಗುತ್ತಿದ್ದು,ಅರಣ್ಯ ನಾಶದಿಂದ ಕಾಡಿನಲ್ಲಿರುವ ಪ್ರಾಣಿಗಳು ತಮ್ಮ ವಾಸ ಸ್ಥಾನ ವನ್ನು ಬಿಟ್ಟು ನಾಡಿಗೆ ಬರುವಂತಾಗಿದೆ.ಅದಕ್ಕಾಗಿ ಪ್ರಸ್ತುತ ಸಂಧರ್ಭದಲ್ಲಿ ಅರಣ್ಯಗಳ ಹಾಗೂ ವನ್ಯಜೀವಿಗಳ ಮಹತ್ವವನ್ನು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು
ಉತ್ತಮ ಚಿತ್ರ ಬರೆದ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನವೋದಯ ಶಾಲೆಯ ಪ್ರಾಚಾರ್ಯ ಗಣೇಶ್ ಟಿ.ವಿ ಹಾಗೂ ಪ್ರಿನ್ಸಿಪಾಲ್ ವಿ ನಾಗರಾಜನ್ ಹಾಗೂ ಶಾಲೆಯ ಸಿಬ್ಬಂದಿಗಳಾದ ಓಂಕಾರ ಮೂರ್ತಿ,ಸಿದ್ದಪ ಕೆ.ಸಣ್ಣಪಾಪನಾಯಕ. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ವಸಂತ್ ಕುಮಾರ್, ಉಪವಲಯ ಅರಣ್ಯಾಧಿಕಾರಿ, ವಿನಯ್ ಕುಮಾರ್ ,ಉಪವಲಯ ಅರಣ್ಯಾಧಿಕಾರಿ,ಅರಣ್ಯ ರಕ್ಷಕ ಪ್ರಮೋದ್,ದರ್ಶನ್,ಶುಭಾ, ಕಾವೇರಿ,ಮಾರುತಿ ಇತರರಿದ್ದರು.ಪ್ರಬಂಧದಲ್ಲಿ ಸ್ಪರ್ಧೆಯಲ್ಲಿ
ಪ್ರಥಮ ಹೇಮಲತಾ .ಎಂ
ದ್ವಿತೀಯ ಸಮೃದ್ಧಿ .ಎಸ್
ತೃತೀಯ ವೀಕ್ಷಾ ವರ್ಮಾ. ಎಂ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading