ಚಳ್ಳಕೆರೆ: ಮೆಕ್ಕೆ ಜೋಳ ಬೆಳೆ ನಾಶ ಪಡಿಸಲು ಯಾರೋ ಕೀಡಿಗೆಡಿಗಳು ವೈಯಕ್ತಿಕ ದ್ವೇಷದಿಂದ ಬೆಂಕಿಯನ್ನು ಇಟ್ಟು ಪರಾರಿಯಾಗಿದ್ದು, ಬೆಂಕಿಯ ಹೊಗೆಯನ್ನು ಕಂಡ ರೈತನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಾಣೀಕೆರೆ ಗ್ರಾಮದ ಬಡವನಹಳ್ಳಿ ಕಾವಲಿನಲ್ಲಿ ಬರುವ ರಿ.ಸರ್ವೆ ನಂಬರ್ 44 ರಲ್ಲಿ ಮಂಜಪ್ಪ ಎಂಬ ರೈತ ತನ್ನ 3 ಎಕರೆ ಜಮೀನಿನಲ್ಲಿ ನೀರಾವರಿ ಮಾಡಿಕೊಂಡು ಮೆಕ್ಕೆ ಜೋಳ ಬೆಳೆಯನ್ನು ಬೆಳೆಯಲು ಬಿತ್ತನೆ ಮಾಡಿದ್ದಾನೆ, ರೈತನ ಒಕ್ಕಲು ತನ ಸಹಿಸದ ಯಾರೋ ಕೀಡಿಗೆಡಿಗಳು ವೈಯಕ್ತಿಕ ದ್ವೇಷದಿಂದ, ಮೆಕ್ಕೆ ಜೋಳ ಬೆಳೆಯ ಪಕ್ಕದಲ್ಲಿ ಇರುವ ಫಾರೆಸ್ಟ್ ಗೆ ಬೆಂಕಿಯನ್ನು ಇಟ್ಟು ಪರಾರಿಯಾಗಿದ್ದು. ಗಾಳಿಯ ಮೂಲಕ ಬೆಂಕಿ ಜಮೀನಿನ ಸುತ್ತ ಆವರಿಸಿದ್ದನ ಗಮನಿಸಿದ ರೈತ ತನ್ನ ಸಮಯ ಪ್ರಜ್ಞೆಯಿಂದ ಅಗ್ನಿಶಾಮಕ ದಳದವರನ್ನು ಕರೆಸಿ ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿ ಬೆಂಕಿಯನ್ನು ನಂದಿಸಿ ಅರ್ಧ ಬೆಳೆಯನ್ನು ಉಳಿಸಿ ಕೊಳ್ಳಲು ಯಶಸ್ವಿ ಯಾಗಿದ್ದಾನೆ.







ರೈತ ಮಂಜಪ್ಪ ಮಾತಾನಾಡಿ ಮಾಹಿತಿ ನೀಡಿ ನೀರಾವರಿ ಮಾಡಲು 30 ಸಾವಿರ ಹಣವನ್ನು ಸಾಲ ಮಾಡಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದು ವೈಯಕ್ತಿಕ ದ್ವೇಷಕ್ಕೆ ಬೆಂಕಿ ಹಚ್ಚಿದರಿಂದ 7 ತೆಂಗಿನ ಗಿಡಗಳು ಒಂದು ಎಕರೆ ಯಾಷ್ಟು ಮೆಕ್ಕೆ ಜೋಳ ಬೆಳೆ ಬೆಂಕಿಯ ಝಳಕ್ಕೆ ಸಂಪೂರ್ಣ ಒಣಗಿ ಹೋಗಿದೆ. ಬೆಂಕಿ ಝಳಕ್ಕೆ ಸಸಿಗಳು ಬತ್ತಿ ಹೋಗುತ್ತವೆ.ಇದರಿಂದ ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಪರಿಹಾರ ನೀಡುವಂತೆ ಮನವಿಗೆ ಆಗ್ರಹಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.