ಮೊಳಕಾಲ್ಮೂರು ಫೆ.8 ಉರ್ತಾಳು ಗ್ರಾಮಕ್ಕೆ ಭೇಟಿ ನೀಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್ ವೈ ಚೇತನ್…. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಉರ್ತಾಳು ಗ್ರಾಮದಲ್ಲಿ ಕಳೆದ ಐದಾರು ವರ್ಷಗಳಿಂದಲೂ ಜಾತಿ ಪ್ರಮಾಣ ಪತ್ರವಿಲ್ಲದೆ ನರೇಗಾ ಜಾಬ್ ಕಾರ್ಡ್ಗಳು.. ವಿದ್ಯಾರ್ಥಿ ವೇತನ… ಅನ್ನಭಾಗ್ಯ ಗೃಹಜೋತಿ ಶಕ್ತಿ ಯೋಜನೆ ಸೇರಿದಂತೆ ಹಲವಾರು ಸರ್ಕಾರಿ ಯೋಜನೆಗಳು ಪಡೆಯುವಲ್ಲಿ ಮಹಿಳೆಯರು ವಿಫಲರಾಗಿದ್ದರು…
ಇದನ್ನು ಮನಗಂಡ ತಾಲೂಕು ಗ್ಯಾರಂಟಿ ಅನುಸ್ತಾನಗಳ ಸಮಿತಿಯ ಅಧ್ಯಕ್ಷ ಎನ್ ವೈ ಚೇತನ್ ಹಾಗೂ ಕಮಿಟಿ ಸದಸ್ಯರು ಉರ್ತಾಳು ಗ್ರಾಮಕ್ಕೆ ಕುದ್ದು ಭೇಟಿ ನೀಡಿ ಗ್ರಾಮಸ್ಥ ಮಹಿಳೆಯರಿಂದ ಸಮಸ್ಯೆಗಳನ್ನು ಹಾಲಿಸಿ ಮಾತನಾಡಿದ ಅವರು….
ಈ ಗ್ರಾಮದ ಸಮಸ್ಯೆಗಳನ್ನು ಹಾಲಿಸಲು ಖುದ್ದಾಗಿ ನಾನು ಹಾಗೂ ನನ್ನ ಕಮಿಟಿಯ ಸದಸ್ಯರು ಸೇರಿ ಬಂದಿದ್ದು ಸಮಸ್ಯೆ ಇರುವ ಮನೆಗಳಿಗೆ ಭೇಟಿ ನೀಡಿ ಇರುವ ಸಮಸ್ಯೆಯನ್ನು ಹರಿತ್ತಿದ್ದೇನೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಕ್ಷೇತ್ರದ ಶಾಸಕರ ಜೊತೆ ಚರ್ಚಿಸಿ ಈ ಸಮಸ್ಯೆಗಳಿಗೆ ಸೂಕ್ತ ತೀರ್ಮಾನವನ್ನ ಕೈಗೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರು ಸೇರಿ ತಾಲೂಕು ಗ್ಯಾರಂಟಿ ಅನುಷ್ಠಾನಗಳ ಸಮಿತಿಗೆ ಸಮಸ್ಯೆಗಳ ಕುರಿತು ಮನವಿ ಪತ್ರವನ್ನು ನೀಡಿದರು…
ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಕಮಿಟಿಯ ಕಾರ್ಯ ವೈಖರಿಗೆ ಗ್ರಾಮದ ಜನತೆ ಹಾಗೂ ತಾಲೂಕಿನ ಜನತೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ…
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನಗಳ ಸಮಿತಿ ಸದಸ್ಯರಾದ ದೇವಸಮುದ್ರ ಪರಮೇಶ್ವರಪ್ಪ … ತಮ್ಮೇನಹಳ್ಳಿ ನರಸಿಂಹ ರೆಡ್ಡಿ .. ಬಾಂಡ್ ರವಿ ಇಸ್ಮಾಯಿಲ್… ಸೇರಿದಂತೆ ಉರ್ತಾಳ ಗ್ರಾಮದ ಮುಖ್ಯಸ್ಥರು ..ಯುವಕರು.. ಮಹಿಳೆಯರು… ಹಾಗೂ ಚೇತನ್ ಅಭಿಮಾನಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.