ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಉತ್ತಮ ಪ್ರತಿಭೆ ಗಾಯಕ ಕೆ.ಟಿ. ಮುತ್ತುರಾಜ್ ರವರಿಗೆ ಚಿತ್ರಸಂತೆಯಿಂದ ಕಲೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಚಿತ್ರಸಂತೆ ಪತ್ರಿಕೆ ಸಂಪಾದಕ ಗಿರೀಶ್ ಹೇಳಿದ್ದಾರೆ.


ಗುರುವಾರ ಬೆಂಗಳೂರಿನ ಹೈಡಿ ಪಾರ್ಕ್ ಅಪಾರ್ಟ್ಮೆಂಟ್ ಹೋಟೆಲ್ ನಲ್ಲಿ ನಡೆದ ಚಿತ್ರಸಂತಿ 50ನೇ ಸುವರ್ಣ ಮಹೋತ್ಸವ ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ -2024 ಕಾರ್ಯಕ್ರಮದಲ್ಲಿ ಚಳ್ಳಕೆರೆ ತಾಲೂಕಿನ ನಲಗೇತನಹಟ್ಟಿ ಗ್ರಾಮದ ಗಾಯಕ ಕೆ. ಟಿ. ಮುತ್ತುರಾಜ್ ರವರಿಗೆ ಚಿತ್ರಸಂತೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಮಾತನಾಡಿದರು ಗಾಯಕ ಮುತ್ತುರಾಜ್ ಉತ್ತಮ ಪ್ರತಿಬಿವುಳ್ಳ ಗಾಯಕರಾಗಿದ್ದಾರೆ. ಕನ್ನಡದ ಆಸ್ತಿ ಸಿ ಅಶ್ವತ್ ಅವರನ್ನು ಈ ಕಾರ್ಯಕ್ರಮದಲ್ಲಿ ನೆನಪಿಸಿಕೊಟ್ಟಿದ್ದಾರೆ ನಮ್ಮ ಚಿತ್ರ ಸಂತೆ ವತಿಯಿಂದ ಮುತ್ತುರಾಜ್ ಕಲೆಗೆ ಸಂಪೂರ್ಣ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
About The Author
Discover more from JANADHWANI NEWS
Subscribe to get the latest posts sent to your email.