September 15, 2025

ಮೊಳಕಾಲ್ಮೂರಿನ ರಾಮಸಾಗರದ ಸಣ್ಣಗಂಗಪ್ಪ ಕಳೆದ ತಿಂಗಳ 25 ರಂದು ಕುರಿಗಳನ್ನು ಕುರಿ ಹಟ್ಟಿಯಲ್ಲಿ ಕೂಡಿ‌ ರಾತ್ರಿ ಮಲಗಿದ್ದಾಗ ಕುರಿಗಳ್ಳರು ಒಮಿನಿ‌ಯಲ್ಲಿ 12 ಕುರಿಗಳನ್ನು‌ ಕಳವು ಮಾಡಿ ತುಂಬಿಕೊಂಡು ಪರಾರಿಯಾಗಿದ್ದರು. ರಾಂಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಪತ್ತೆಗೆ ಎಸ್ಪಿ ರಂಜಿತ್ ಕುಮಾರ್ ‌ಬಂಡಾರು, ಎಎಸ್ ಸ್ಪಿ ಕುಮಾರಸ್ವಾಮಿ, ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಹಾಗೂ ಮೊಳಕಾಲ್ಮೂರು ಸಿಪಿಐ ವಸಂತ್ ವಿ‌ ಅಸೋದೆ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತಂಡವು ದಾವಣಗೆರೆ ಹೊರ ವಲಯದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ, ಅವರಿಂದ 80 ಸಾವಿರ ಮೌಲ್ಯದ 12 ಕುರಿಗಳು ಹಾಗೂ ಮಾರುತಿ‌ ಒಮಿನಿಯ‌ನ್ನು‌ ವಶಕ್ಕೆ ‌ಪಡೆದಿದ್ದಾರೆ. ನಂತರ ಅವರನ್ನು ನ್ಯಾಯಾಲಯದ ಮುಂದೆ‌ ಹಾಜರು ಪಡಿಸಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ. ಪೊಲೀಸರ ಈ ಕಾರ್ಯವ‌ನ್ನು‌ ಶ್ಲಾಘಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading