August 9, 2025
IMG-20250807-WA0178.jpg

ನಾಯಕನಹಟ್ಟಿ:: ತಾಯಿ ಎದೆ ಹಾಲು ಅಮೃತವಿದ್ದಂತೆ ಎಂದು ಮೇಲ್ವಿಚಾರಕಿ ಜಯಲಕ್ಷ್ಮಿ ಹೇಳಿದರು.

ಗುರುವಾರ ಹೋಬಳಿಯ
ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಳ್ಳಕೆರೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ.
ಮಾತನಾಡಿದ ಅವರು ಮಗುವಿಗೆ ಸಾಂಕ್ರಮಿಕ ರೋಗಗಳು ಬಾರದಂತೆ ತಡೆಯುವ ಶಕ್ತಿ ತಾಯಿಯ ಎದೆ ಹಾಲಿಗೆ ಇದೆ ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಎದೆ ಹಾಲು ಕುಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕಿ ವೀಣಾ, ಆಶಾ ಕಾರ್ಯಕರ್ತೆ ಸವಿತಾ ,ಅಂಗನವಾಡಿ ಶಿಕ್ಷಕಿರಾದ ಮಂಗಳಮ್ಮ ಕಾವೇರಿ ಸರೋಜಾ ಚನ್ನಮ್ಮ, ಬೊಮ್ಮಕ್ಕ. ಸೇರಿದಂತೆ ಫಲಾನುಭವಿಗಳು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading