ಚಳ್ಳಕೆರೆ ಮಾ.7
ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಲಭ್ಯದ ಕೊರತೆಯಿಂದಾಗಿ ಪಶು ವೈದ್ಯಕೀಯ ಸೇವೆ ಸೊರಗುತ್ತಿದೆ. ಜಾನುವಾರಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ರೈತರು ಪರದಾಡುವಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಆಂದ್ರಗಡಿಭಾಗಕ್ಕೆ ಹೊಂದಿಕೊಂಡ ಜಾಜೂರು ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ರೈತರ ಜಾನುವಾರುಗಳ ಚಿಕಿತ್ಸೆಗೆ ಪರದಾಡುವಂತಾದರೆ ಇಲ್ಲಿನ ಕಾಂಪೌಂಡರ್ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಆಸ್ಪತ್ರೆ ಆವಣದಲ್ಲಿ ರೈತರು ಬೆಳೆದ ಹುಣಿಸೆ ಹಣ್ಣು ಹಾಕಿರುವುದಲ್ಲದೆ ಪ್ರಾಕ್ಟರ್ ಸಹ ಪಶು ಆಸ್ಪತ್ರೆ ಮುಂಭಾಗದಲ್ಲೇ ನಿಲ್ಲಿಸಿರುವುದು ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸ್ಥಳವಕಾಶವಿಲ್ಲದಂದಾಗಿದೆ.
ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಕಬ್ಬಿಣದ ಟ್ರೇವೀಸ್ ತುಕ್ಕು ಹಿಡಿದು ಮುರಿದು ಬಿದ್ದಿದ್ದು ಜಾನುವಾರಗಳಿಗೆ ಚುಚ್ಚು ಮದ್ದು.ತಪಾಸಣೆ ಮಾಡಲು ಪಶುಸಂಗೋಪನೆ ಸಿಬ್ಬಂದಿ ಹರಸಹಾಸ ಪಡುವಂತಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಪಶುಆಸ್ಪತ್ರೆಯ ಆವರಣದಲ್ಲಿ ಹಾಕಿರುವ ಹುಣಿಸೆ ಹಣ್ಣು ತೆರವುಗೊಳಿಸಿ ಮುರಿದು ಬಿದ್ದಿರುವ ಜಾನುವಾರು ಚಿಕಿತ್ಸಾ ಟ್ರೇಸ್ ದುರಸ್ಥಿಪ ಪಡಿಸುವರೇ ಕಾದು ನೋಡ ಬೇಕಿದೆ.


















About The Author
Discover more from JANADHWANI NEWS
Subscribe to get the latest posts sent to your email.