ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು: ನಗರದ ಎನ್.ಆರ್.ಮೊಹಲ್ಲಾದಲ್ಲಿನ ಉಪ್ಪಾರ ಸಂಘವು ಹೊರತಂದಿರುವ 2026ನೇ ಸಾಲಿನ ನೂತನ ದಿನದರ್ಶಿಕೆಯನ್ನು ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಅವರ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಉದಯ್ ಕುಮಾರ್, ಮೈಸೂರು ನಗರ ಕಾಂಗ್ರೆಸ್ ಮುಖಂಡರಾದ ಎಂ.ಎನ್.ಮಹದೇವ್, ಸಂಘದ ಗೌರವಾಧ್ಯಕ್ಷರಾದ ನಾಗರಾಜು, ಅಧ್ಯಕ್ಷರಾದ ಸಿ.ಗೋವಿಂದರಾಜು, ಉಪಾಧ್ಯಕ್ಷರಾದ ಕಾರಾಪುರ ಮಹೇಶ್, ಕಾರ್ಯದರ್ಶಿಯಾದ ಸಿದ್ದರಾಜು, ಸಹಕಾರ್ಯದರ್ಶಿಯಾದ ಮಾಸ್ಟರ್ ಶಿವು, ಖಜಾಂಚಿಯಾದ ಸಿದ್ದರಾಜುಗೊಂಬೆ, ನಿರ್ದೇಶಕರಾದ ಪಾಪಣ್ಣ, ಯಜಮಾನರುಗಳಾದ ಎಂ.ಮಹದೇವ್, ನಾಗಣ್ಣ, ಕೆಸ್ತೂರು ಮಹದೇವ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.