September 15, 2025

ಹಿರಿಯೂರು ಅ.6  ಮಳೆಗಾಲದ ಮಲೆನಾಡು ನಮ್ಮೂರು…..
ಚಿತ್ರದುರ್ಗ ಜಿಲ್ಲೆಯು ಬಯಲುಸೀಮೆ, ಬಂಡೆ- ಹೆಬ್ಬಂಡೆಗಳ ಬೀಡು, ಕೋಟೆಕೊತ್ತಲಗಳ ನಾಡು ಎಂದೇ ಹೆಸರಾಗಿದೆ. ಆದರೆ ಈ ಮೇಲಿನ ಹೇಳಿಕೆಗೆ ವಿರುದ್ಧವೆಂಬಂತೆ ಮಲೆನಾಡಿನ ಮೈ ಸಿರಿಯನ್ನು ಬಯಲುಸೀಮೆಯ ಜನರಿಗೆ ಉಣಬಡಿಸುವ ಬೆಟ್ಟಗುಡ್ಡಗಳಿಂದ ಕೂಡಿದ, ನಿಸರ್ಗ ನಿರ್ಮಿತ ಝರಿ ತೊರೆಗಳಿಂದ ಆವೃತವಾಗಿರುವ ಹಾಗೂ ಗಿರಿ ಶಿಖರಗಳೊಂದಿಗೆ ತನ್ನ ಮೈಸಿರಿಯನ್ನು ಹೆಚ್ಚಿಸಿಕೊಂಡಿರುವ ಕೆಲವು ಪ್ರಮುಖ ಪ್ರೇಕ್ಷಣೀಯ ನಿಸರ್ಗ ನಿರ್ಮಿತ ರಮಣೀಯ ಸ್ಥಳಗಳು ಈ ಜಿಲ್ಲೆಯಲ್ಲಿವೆ
ಅವುಗಳಲ್ಲಿ ಪ್ರಮುಖವಾದದ್ದು ” ಉತ್ತರೆ ಸಿದ್ದಪ್ಪನ ವಜ್ರ “

ಮಲೆನಾಡಿನ ಬೆಟ್ಟಗಳಂತೆ ಭಾಸವಾಗುವ ಈ ಪ್ರಕೃತಿಯ ರಮಣೀಯ ತಾಣವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿದೆ.

ಈ ಸ್ಥಳವು ಸುಂದರ ಬೆಟ್ಟಗುಡ್ಡಗಳನ್ನು ಹೊಂದಿರುವ, ನಿಸರ್ಗ ನಿರ್ಮಿತ ಝರಿ, ಹಳ್ಳ-ಕೊಳ್ಳ ಗಳಿಂದ ಕೂಡಿದ ಪ್ರೇಕ್ಷಣಿಯ ಸ್ಥಳವಾಗಿದೆ. ಅಲ್ಲದೆ ಪವನ ಶಕ್ತಿ ಯಂತ್ರಗಳೊಂದಿಗೆ ತನ್ನ ಮೈಸಿರಿಯನ್ನು ಹೆಚ್ಚಿಸಿಕೊಂಡಿರುವ ಚಾರಣಿಗರನ್ನ ಸೆಳೆಯುವ ಅಪ್ಪಟ ನಿಸರ್ಗ ಮಾತೆಯ ತಾಣವಾಗಿದೆ.

ಕಡಿದಾದಾ ಬೆಟ್ಟಗಳ ಸಾಲು… ಸಾಗುವ ದಾರಿಯುದ್ದಕ್ಕೂ ಸಿಗುವ ಹೆಬ್ಬಂಡೆಗಳ ಸಾಲು.. ಕಿರಿದಾದ ಕಾಲು ದಾರಿ… ಹಚ್ಚ ಹಸಿರಾಗಿರುವ ನಿಸರ್ಗಮಾತೆಯ ಒಡಲು.. ಬಯಲು ಸೀಮೆ ಚಾರಣಿಗರಿಗಂತೂ ಹೇಳಿ ಮಾಡಿಸಿದ ಸ್ಥಳ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading