September 15, 2025
IMG-20250505-WA0172.jpg

ನಾಯಕನಹಟ್ಟಿ::ಮೇ.5.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಚಳ್ಳಕೆರೆ ತಾಲೂಕಿನ ವಕೀಲರು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ವಕೀಲ ಜಯಶೀಲರೆಡ್ಡಿ ಹೇಳಿದ್ದಾರೆ.

ಸೋಮವಾರ ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳ ಮತ್ತು ಹೊರಮಠದಲ್ಲಿ ಚಳ್ಳಕೆರೆ ತಾಲೂಕಿನ ವಕೀಲರೆಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಳೆದ ಮೂರು ವರ್ಷದಿಂದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಚಳ್ಳಕೆರೆ ತಾಲೂಕಿನ ವಕೀಲರೆಲ್ಲರೂ ಪಾದಯಾತ್ರೆ ಮೂಲಕ ಭಕ್ತಿಯನ್ನು ಸಮರ್ಪಿಸುತ್ತೇವೆ ನಾಡಿನ ಸಮಸ್ತ ಜನತೆಗೆ ಉತ್ತಮ ಮಳೆ ಬೆಳೆ ಸಮೃದ್ಧಿಯಾಗಿ ಉತ್ತಮ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂದರು.

ಇದೇ ವೇಳೆ ವಕೀಲರಾದ ಜಿ.ಒ. ಸುಮಲತಾ ಮಾತನಾಡಿದರು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗೆ ಪಾದಯಾತ್ರೆ ಮೂಲಕ ಭಕ್ತಿಯನ್ನು ಸಮರ್ಪಿಸುವುದು ಸಂತಸ ತಂದಿದೆ ಸಮಾಜದಲ್ಲಿನ ಎಲ್ಲಾ ಜನರಿಗೆ ಮತ್ತು ನಾಡಿಗೆ ಉತ್ತಮ ಮಳೆ ಬೆಳೆ ಸಮೃದ್ಧಿಯಾಗಲಿ ಎಂದರು.

ಹಿರಿಯ ವಕೀಲ ಟಿ.ಎಸ್. ನಾಗರಾಜ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ. ಪಾಲಯ್ಯ, ಹಿರಿಯ ವಕೀಲರಾದ ಜಿ.ಎಸ್. ಶರಣಪ್ಪಯ್ಯ, ವಕೀಲರಾದ ಕೆ.ಬಿ. ಪ್ರಭಾಕರ್, ಬಿ ಪಾಪಣ್ಣ, ಎ.ಜಿ. ಕಾಂತರಾಜ್ ಎತ್ತಿನಹಟ್ಟಿ, ಜಿ. ಗೋಪಿ, ಟಿ ನಾಗೇಂದ್ರಪ್ಪ, ಟಿ. ಮಹಾಂತೇಶ್, ಎನ್. ಟಿ. ತಿಪ್ಪೇಸ್ವಾಮಿ, ವೈ.ಮಲ್ಲೇಶ್, ಬಸವರಾಜೇಶ್ವರಿ, ಜಿ.ಕೆ. ಪವಿತ್ರ,ಇನ್ನೂ ಮುಂತಾದವರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading