December 14, 2025
IMG-20250306-WA0103.jpg

ಚಳ್ಳಕೆರೆ ಮಾ.6

ಸ್ಕೂಟಿಯಲ್ಲಿದ್ದ ಹಣ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ರಸ್ತೆಯ ಮಾರುತಿ ಸ್ಟೋರ್ ಬಳ ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ‌ಘಟನೆ ನಡೆದಿದೆ.
ನರಹರಿ ನಗರದ ರವಿಕುಮಾರ್ ಎಂದಿನಂತೆ ಕರ್ನಾಟ ಬ್ಯಾಂಕ್ ನಲ್ಲಿ‌1.40 ಲಕ್ಷ ರೂ ಡ್ರಾ ಮಾಡಿಕೊಂಡು ಬೆಂಗಳೂರು ರಸ್ತೆ ಮಾರುತಿ ಸ್ಟೋರ್ ಕಿರಸಣಿ ಅಂಗಡಿ ಬಳಿ ಹಣ ಇಟ್ಟಿದ್ದ ಸ್ಕೂಟಿಯನ್ನು ನಿಲ್ಲಿ ಅಂಗಡಿ ಒಳಗೆ ಹೋಗುವುದನ್ನೇ ಹೊಂಚು ಹಾಕಿ ಕಾಯುತ್ತಿದ್ದ ಮೂರು ಜನರು ಅದರಲ್ಲಿ ಒಬ್ಬ ಸ್ಕೂಟಿ ಕಾಣದಂತೆ ಅಂಗಡಿ ಮುಂದೆ ಅಡ್ಡವಾಗಿ ನಿಂತರೆ ಉಳಿದ ಇಬ್ಬರು ಸ್ಕೂಟಿಯಲ್ಲಿದ್ದ 1.40 ಲಕ್ಷ ಹಣವನ್ನು ಕದ್ದು ಮೂರು ಜನರು ಪರಾರಿಯಾಗುತ್ತಾರೆ.
ಸ್ಕೂಟಿ ಮಾಲಿಕ ರವಿಕುಮಾರ್ ಬಂದು ನೋಡಿದಾಗ ಹಣ ಕಳಾವಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಅಂಗಡಿಯಲ್ಲಿ ಸಿ.ಸಿ.ಕ್ಯಾ‌ಮರ ಪರಿಶೀಲನೆ ಮಾಡಿದಾಗ ಮೂರು ಜನರ ತಂಡ ಕಳವು ಮಾಡಿರುವ ದೃಶ್ಯ ಸೆರೆಯಾಗಿದ್ದು ತಕ್ಷಣ ಪೋಲಿಸ್ ಇಲಾಖೆ ಮಾಹಿತಿ ನೀಡಿದ್ದು ಸಿ.ಸಿ.ಕ್ಯಾಮರದಲ್ಲಿನ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ಗಳ ಮುಂದೆ ಅಕ್ರಮ ಪೆಟ್ಟಿ ಅಂಗಡಿಗಳು.
ಚಿತ್ರದುರ್ಗ ರಸ್ತೆಯಲ್ಲಿ ಕರ್ನಾಟಕ ಬ್ಯಾಂಕ್ ಎ ಟಿ ಎಂ .ಕೆನರಾ ಬ್ಯಾಂಕ್ .ಎಸ್ ಬಿ.ಐ. ಪ್ರಾವಾಸಿ ಮಂದಿರದವರೆಗೆ ಬ್ಯಾಂಕ್ ಗಳು ಇರುವುದರಿಂದ ಬ್ಯಾಂಕ್ ಗಳ ಮುಂದಿನ ಹೋಟೆಲ್ ಗಳಲ್ಲಿ ಟೀ. ಸೀಗರೇಟ್ ಸೇವಿಸುತ್ತಾ ಬ್ಯಾಂಕ್ ಹಾಗೂ ಎಟಿಎಂ ಗಳಲ್ಲಿ ಹಣ ಬಿಡಿಸುವುದನ್ನು ನೋಡಿಕೊಂಡು ಅವರನ್ನು ಹಿಂಬಾಲಿ ಹಣ ಕಳವು ಮಾಡಿದ ಪ್ರಕರಣಗಳು ಸಾಕಷ್ಟಿವೆ ಆದ್ದರಿಂದ ಬ್ಯಾಂಕ್ ಹಾಗೂ ಎಟಿಎಂ ಮುಂಭಾಗದಲ್ಲಿರುವ ಅಕ್ರಮ ಟೀ ಸ್ಟಾಲ್ ಹೋಟೆಲ್ ಗಳನ್ನು ತೆರವುಗೊಳಿಸುವಂತೆ ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading