January 29, 2026
IMG-20250206-WA0189.jpg

.

ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ಎರಡನೇ ಸಾಮಾನ್ಯ ಸಭೆಯು ಪ. ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸರ್ವ ಸದಸ್ಯರುಗಳು ಪಟ್ಟಣ ಪಂಚಾಯಿತಿಯಲ್ಲಿರುವ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರ ಮಾಹಿತಿ ಪಡೆದರು. ನಂತರ ಪಟ್ಟಣ ಪಂಚಾಯತಿ ವಾರ್ಡ್ ಗಳಲ್ಲಿ ಬರುವ ಮನೆಗಳಿಗೆ ಇ ಸ್ವತ್ತು, ಮಳಿಗೆಗಳು, ಸಿಸಿ ರಸ್ತೆ, ಶಾಲಾ ಕಾಂಪೌಂಡ್, ಚಿಕನ್ ಮತ್ತು ಮಟನ್ ಅಂಗಡಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ, ಚರಂಡಿ, ಪೈಪ್ ಲೈನ್, ಶಾಲೆಯನ್ನು ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿ ಕಾಂಪೌಂಡ್ ನಿರ್ಮಿಸುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಕಲಚೇತನರಿಗೆ ಸಹಾಯಧನ ವಿತರಿಸುವುದು, ಗ್ರಂಥಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಖಾಲಿ ನಿವೇಶನ ಮಂಜೂರು ಮಾಡುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ಸರ್ಕಾರದ ಆದೇಶದಂತೆ KSWAN ಇಂಟರ್ನೆಟ್ ಸಂಪರ್ಕ ಸೌಲಭ್ಯಕ್ಕಾಗಿ ಸರ್ಕಾರ ನಿಗದಿಪಡಿಸಿರುವ IT Software &Hardware Router ಗಳನ್ನು ಹೊಸದಾಗಿ ಖರೀದಿಸುವ ಬಗ್ಗೆ ಚರ್ಚಿಸಲಾಯಿತು. ನಂತರ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ರಚಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ ಪಿ ತಿಪ್ಪೇಸ್ವಾಮಿ. ಸದಸ್ಯರುಗಳಾಗಿ ಅಬಕಾರಿ ತಿಪ್ಪೇಸ್ವಾಮಿ,ಟಿ. ಮಹೇಶ್ವರಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸದಸ್ಯರಾದ ಜೆ ಆರ್ ರವಿಕುಮಾರ್,ಎಂ.ಟಿ.ಮಂಜುನಾಥ,ಕೆ ಪಿ ತಿಪ್ಪೇಸ್ವಾಮಿ,ಓ ಮಹೇಶ್ವರಿ,ಬಿ ಗುರುಶಾಂತಮ್ಮ,
ಡಿ ಸುನಿತ ಮುದಿಯಪ್ಪ,ಈರಮ್ಮ,ಸೈಯ್ಯದ್ ಅನ್ವರ್,ಪಾಪಮ್ಮ,ತಿಪ್ಪೇಶ್,ಬಿ ವಿನುತಾ,ಎನ್ ಮಹಂತಣ್ಣ,ಪಿ ಬೋಸಮ್ಮ,ಪಿ ಓಒಯ್ಯ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading