ಹಿರಿಯೂರು ಫೆ.6
ಪಶುಪಾಲನೆಯಿಂದ ಉತ್ತಮ ಜೀವನ ಸಾಗಿಸಬಹುದು. ಹೈನುಗಾರಿಕೆಗೆ ಸರಕಾರ ಅನೇಕ ಉಪಯುಕ್ತ ನೀಡು ತ್ತಿದೆ. ಪ್ರತಿಯೊಬ್ಬರೂ ಇಂತಹ ಸೌಲಭ್ಯ ಗಳನ್ನು ಸದುಪಯೋಗಪಡಿಸಿಕೊಂಡು ಹೈನು ಗಾರಿಕೆಗೆ ಉತ್ತೇಜನ ನೀಡುವಂತೆ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಕಿವಿಮಾತು ಹೇಳಿದರು. ಹಿರಿಯೂರು ತಾಲೂಕಿನ ಅರಳಿಕೆರೆ ಗ್ರಾಮದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ,
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಿರಿಯೂರು
ಧರ್ಮಪರ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಧರ್ಮಪುರ
ಇವರ ಸಂಯುಕ್ತ ಆಶ್ರಯದಲ್ಲಿ ಮಿಶ್ರತಳಿ ಹಸು-ಕರುಗಳ ಪ್ರದರ್ಶನ ಮತ್ತು
ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಶುಪಾಲನೆ ಇಲಾಖೆ ಹಾಗೂ ಹಾಲು ಉತ್ಪಾದಕರ ಒಕ್ಕೂಟದಿಂದ ಹತ್ತು ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಸೌಲಭ್ಯಗಳನ್ನು ಸದುಪಯೋಗಪ ಡಿಸಿ ಕೊಂಡು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿ.ಆರ್ ರವಿಕುಮಾರ್ ಮಾತನಾಡಿದರು ಮತ್ತು ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಹಾಗೂ ವಿಸ್ತರಣಾಧಿಕಾರಿ ಕೃಷ್ಣಪ್ಪ ಮತ್ತು ಪಶು ವೈದ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು





About The Author
Discover more from JANADHWANI NEWS
Subscribe to get the latest posts sent to your email.