ಹಿರಿಯೂರು:
ಕೆರೆಗಳು ಒಣಗಿ ಹೋಗಿದ್ದು, ಈ ಕೆರೆಗಳಿಗೆ ವಾಣಿವಿಲಾಸ ನೀರು ಬರದ ಕಾರಣ ಅಂತರ್ಜಲ ಕುಸಿತವಾಗಿದೆ. ಶೀಘ್ರ ನೀರು ಹರಿಸುವಂತೆ ಒತ್ತಾಯಿಸೋಣ ಎಂಬುದಾಗಿ ರೈತ ಸಂಘದ ತಾಲ್ಲೂಕು ಘಟಕದ ತಾಲ್ಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಬೀರೇನಹಳ್ಳಿಯಲ್ಲಿ ಭಾನುವಾರ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದಿಂದ ವಿವಿಪುರ ಭಾಗದ ಕೆರೆಗಳಿಗೆ ನೀರು ಹರಿಸಲು ಒತ್ತಾಯಿಸಿ ಜನವರಿ 20ರಂದು ಜವನಗೊಂಡನಹಳ್ಳಿ ಭಾಗದ ರೈತರು ಕರೆ ನೀಡಿರುವ ಹಿರಿಯೂರು ಬಂದ್ ಗೆ ಬೆಂಬಲಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಜವನಗೊಂಡನಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಆಭಾಗದ ರೈತರು ಬಂದ್ ನಡೆಸುತ್ತಿದ್ದು, ಭರಮಗಿರಿಕೆರೆ, ಗುಡಿಹಳ್ಳಿಕೆರೆ, ಗೌನಹಳ್ಳಿಕೆರೆ, ಬೀರೇನಹಳ್ಳಿ, ಜಾಲಿಕಟ್ಟೆ, ಕೂನಿಕೆರೆ, ತವಂದಿ, ಸೂರಗೊಂಡನಹಳ್ಳಿ, ಕೆರೆಗಳು ಒಳಗೊಂಡಂತೆ ಒಟ್ಟು 16 ಕೆರೆಗಳಿಗೆ ವಾಣಿವಿಲಾಸ ಅಣೆಕಟ್ಟೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ಬಂದ್ ಬೆಂಬಲಿಸಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭೂತಯ್ಯನಹಟ್ಟಿ ರಾಮಣ್ಣ, ತಿಮ್ಮಯ್ಯ, ರಾಮಣ್ಣ, ಮೀಸೆಗೌಡಪ್ಪ, ಹನುಮಂತರಾಯಪ್ಪ, ತಿಪ್ಪೇಸ್ವಾಮಿ, ನರಸಿಂಹಣ್ಣ, ಕರಿಯಣ್ಣ, ಚಿಕ್ಕಣ್ಣ, ಶಿವಣ್ಣ,ಪಾಂಡು, ಎ.ವಿ.ಕೊಟ್ಟಿಗೆತಿಮ್ಮಣ್ಣ, ಗೋಪಾಲಪ್ಪ, ಸಿದ್ಧಮ್ಮ, ಮೂಡ್ಲಪ್ಪ, ಮೂರ್ತಪ್ಪ, ಕೆ.ಜಿ.ಹನುಮಂತರಾಯಪ್ಪ ಸೇರಿದಂತೆ ಅನೇಕರು ರೈತಮುಖಂಡರುಗಳು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.