
ಚಳ್ಳಕೆರೆ ಅ.5 ಈರುಳ್ಳಿ. ಹತ್ತಿ ಶೇಂಗಾ ಬೆಳೆಯುತ್ತಿದ್ದ ಜಮೀನಿನಲ್ಲಿ ತೆಂಗು ಬೆಳೆದ ರೈತ.
ಹೌದು ಇದು ಚಳ್ಳಕೆರೆ ತಾಲೂಕಿನ ಮನ್ನೆಕೋಟೆ ಗ್ರಾಮದ ರೈತ ತಿಪ್ಪಯ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗೌರೀಪುರ ತೊಇಟಗಾರಿಕೆ ಇಲಾಖೆ ನರ್ಸರಿಯಿಂದ ತೆಂಗಿನ ಸಸಿಗಳನ್ನು ತಂದು ತನ್ನ ಎರಡು ಎಕರೆ ಭೂಮಿಯಲ್ಲಿ ಅಂತರ ಬೆಳೆಯಾಗಿ ತೆಂಗಿನ ಸಸಿಗಳನ್ನು ನಾಟಿ ಮಾಡಿ ನರೇಗಾ ಯೋಜನೆಯಡಿ ಸಸಿ ನಾಟಿ ಮಾಡಲು ತೆಗೆದ ಗುಂಡಿಗಳು ಸೇರಿದಂತೆ ಸಸಿ ನಾಟಿ ಮಾಡಿದ 32 ಸಾವಿರ ರೂ ಕೂಲಿ ವೆಚ್ಚ ಹಾಗೂ 6 ಸಾವಿರ ರೂ ತೆಂಗಿನ ಸಸಿಗಳ ಒಟ್ಟು 38 ಸಾವಿರ ರೂಗಳನ್ನು ನರೇಗಾ ಯೋಜನೆಯಡಿಯಲ್ಲಿ ಹಣ ದೊರೆತಿದ್ದು ಇದು ನರೇಗಾ ಯೋಜನೆ ಸಣ್ಣ ರೈತರಿಗೆ ವರದಾನ ವಾಗಿದೆ ಎಂದು ರೈತ ತಿಪ್ಪಯ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ತೋಟಗಾರಿಕೆ ಹಿರಿಯ ಸಹಾಯ ನಿರ್ದೇಶಕ ಡಾ.ವಿರುಪಾಕ್ಷಪ್ಪ ಹಾಗೂ ತಾಂತ್ರಿಕ ಅಧಿಕಾರಿ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.



About The Author
Discover more from JANADHWANI NEWS
Subscribe to get the latest posts sent to your email.