
ಚಳ್ಳಕೆರೆ:ಪಟ್ಟಣದ ಸೂಜಿಮಲ್ಲೇಶ್ವರ ನಗರದ ಶ್ರೀ ಸೂಜಿಮಲ್ಲೇಶ್ವರಸ್ವಾಮಿಯ ಕಾರ್ತಿಕೋತ್ಸವ ಅದ್ದೂರಿಯಾಗಿ ಜರುಗಿತು ಮಹಿಳೆಯರು ದೀಪಗಳನ್ನು ಹಚ್ಚಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವಸಂತ್ ಕುಮಾರ್ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿಯು ಮನಸ್ಸಿನಿಂದ ಬರುವಂತಹದ್ದು ಜೀವನದ ಜಂಜಾಟಗಳ ನಡುವೆ ದೇವಾಲಯಗಳಿಗೆ ಬೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇನ್ನು ಮುಂದೆ ನಾವೆಲ್ಲ ಸಕಾರಾತ್ಮಕ ಚಿಂತನೆ ಮಾಡುತ್ತೇವೆ ಎಂಬ ದೀಕ್ಷೆ ಪಡೆಯೋಣ ಭಾರತ ವಿಶ್ವ ಗುರು ಎನಿಸಲು ಧಾರ್ಮಿಕ ಪರಂಪರೆ ಕಾರಣವಾಗಿದೆ ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು ಕಾರ್ತಿಕೋತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು. ಭಕ್ತರು ತಮ್ಮ ತನು ಮನ ಧನವನ್ನು ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ವಸಂತಕುಮಾರ್, ಕಾರ್ಯದರ್ಶಿ ಜಯಣ್ಣ ಬಸವರಾಜಪ್ಪ, ಮಲ್ಲಿಕಾರ್ಜುನ ಅಜ್ಜಪ್ಪ ಮಹಾಂತೇಶ ಪದ್ಮನಾಭ ಸೇರಿದಂತೆ ಅಪಾರ ಭಕ್ತ ಸಮೂಹ ಪಾಲ್ಗೊಂಡಿದ್ದರು.

About The Author
Discover more from JANADHWANI NEWS
Subscribe to get the latest posts sent to your email.