
ಹೊಳಲ್ಕೆರೆ, ನ. 03 : ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಾಜೂರು ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೊಳಲ್ಕೆರೆ ತಾಲೂಕಿನತಾಲ್ಲೂಕಿನ ಗುಂಜಿಗನೂರು ಗ್ರಾಮದ ಹೊನ್ನಪ್ಪರ ದಿನೇಶ್ ರವರ ಮನೆಯ ಮುಂಬಾಗದ ರಸ್ತೆಯಲ್ಲಿ ಇಸ್ಪೇಟ್ ಜೂಜಾಟ ಅಡ್ಡೆ ಮೇಲೆ ಚಿಕ್ಕಜಾಜೂರು ಠಾಣೆಯ ಪಿ.ಎಸ್.ಐ ನೇತ್ರಾವತಿ ನೇತೃತ್ವದಲ್ಲಿ ಕಾನೂನುಬಾಹಿರವಾದ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 9 ಜನರನ್ನು ಹಾಗೂ ಜೂಜಾಟ ನಿರತರಿಂದ 16410/- ರೂ.ವಶಕ್ಕೆ ಪಡೆಯಲಾಗಿದೆ.
ಭಾನುವಾರ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಈ ಪ್ರಕರಣದಲ್ಲಿ,
ಹೊಳಲ್ಕೆರೆ ತಾಲ್ಲೂಕು ಗುಂಜಿಗನೂರು ಗ್ರಾಮದ
. ವೆಂಕಟೇಶ.ತಿಪ್ಪೇಸ್ವಾಮಿಶಶಿಕುಮಾರ. ಸಂತೋಷಕುಮಾರ.ರವಿಕುಮಾರ.ತಿಮೇಶ.ನಾಗರಾಜ.ಮಂಜುನಾಥ.ನಾಗರಾಜ ಎಂಬ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಈ
ಕಾರ್ಯಚರಣೆಯಲ್ಲಿ ಪಾಲ್ಗೊಂಡ ಠಾಣೆಯ ಪಿ.ಎಸ್.ಐ ನೇತ್ರಾವತಿ, ಸಿಬ್ಬಂದಿಯರಾದ ಮಲ್ಲೇಶ್, ತಿಪ್ಪೇಶ್, ಜಹೀರ್, ಮಂಜುನಾಥ್, ಮನೋಹರ್ ರವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
About The Author
Discover more from JANADHWANI NEWS
Subscribe to get the latest posts sent to your email.