.ವರದಿ. ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ: ಹೋಬಳಿಯ ಮಲ್ಲೂರಹಳ್ಳಿ ಲಂಬಾಣಿಹಟ್ಟಿಯಲ್ಲಿ ಶಿಥಿಲವಾಗಿರುವ ವಿದ್ಯುತ್ ಕಂಬ, ವೈಯರ್ ಗಳನ್ನು ತೆರವು ಮಾಡುವಂತೆ ಗ್ರಾಮಸ್ತರು ಒತ್ತಾಯ ಮಾಡಿದ್ದಾರೆ.


ಗ್ರಾಮದಲ್ಲಿ ಶಿಥಿಲವಾಗಿರುವ ವಿದ್ಯುತ್ ಕಂಬಗಳು, ವೈಯರ್ ಗಳ ಬದಲಾವಣೆ ಮಾಡುವಂತೆ ತಳಕು ಬೆಸ್ಕಾಂ ಕಚೇರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು. ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಶಿಥಿಲವಾಗಿರುವ ಕಂಬಗಳುಮನೆಗಳ ಮುಂಭಾಗದಲ್ಲಿರುವುದರಿಂದ ಜನರು ಆತಂಕದಲ್ಲಿ ಒಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗ್ರಾಮದಲ್ಲಿ ಶಿಥಿಲವಾಗಿರುವ ವಿದ್ಯುತ್ ಕಂಬಗಳು, ವೈಯರ್ ಗಳನ್ನು ತೆರವು ಮಾಡಬೇಕು ಎಂದು ಗ್ರಾಪಂ ಸದಸ್ಯರು, ಮುಖಂಡರು ಒತ್ತಾಯ ಮಾಡಿದರು.
ಗ್ರಾ.ಪಂ. ಸದಸ್ಯ ರಾಜ ನಾಯ್ಕ ,ಪ್ರತಾಪ್, ಆರ್. ರಾಜ ನಾಯ್ಕ, ಸಣ್ಣಮಲ್ಲಯ್ಯ, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.