January 29, 2026
IMG-20250802-WA0146.jpg

ನಾಯಕನಹಟ್ಟಿ : “ಹಿಂದು ಟೆರರ್” “ಕೇಸರಿ ಭಯೋತ್ಪಾದನೆ’ ಎಂಬೆಲ್ಲಾ ನಾಮ ವಿಶೇಷಣಗಳನ್ನು ಬಳಸಿ ಶಾಂತಿಪ್ರಿಯ ಹಾಗೂ ರಾಷ್ಟ್ರೀಯವಾದಿ ಹಿಂದುಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಹೊರಟಿದ್ದ ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಮೊನ್ನೆ ಕೋರ್ಟ್‌ ನೀಡಿದ ತೀರ್ಪು ಪೂರ್ಣವಿರಾಮ ಇಟ್ಟಿದೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೆತ್ರದ ಬಿ ಜೆ ಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಪಟೇಲ್ ಕೆ ಬಿ ಕೃಷ್ಣೆಗೌಡ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹಿಂದೂ ರಾಷ್ಟ್ರವಾದಿಯಾಗ ಬಲ್ಲನೆ ಹೊರತಾಗಿ ಉಗ್ರವಾದಿಯಲ್ಲ,ಕಾಂಗ್ರೆಸ್ಸಿಗರೇ, ಇನ್ನಾದರೂ ನಿಮ್ಮ ಹಿಂದೂ ವಿರೋಧಿ
ಮಾನಸಿಕತೆಯನ್ನು ಬದಲಾಯಿಸಿಕೊಳ್ಳಿ.
ಯಾವುದೇ ಸಾಕ್ಷ್ಯಾಧಾರವಿಲ್ಲದೆ ಹಿಂದೂಗಳ ಮೇಲೆ ಭಯೋತ್ಪಾದನೆಯ ಕಳಂಕ ಹಚ್ಚಿದ ಕಾಂಗ್ರೆಸ್ ಈ ಕೂಡಲೇ ಸಮಸ್ತ ಹಿಂದೂ ಸಮಾಜದ ಕ್ಷಮೆಯಾಚನೆ ಮಾಡಬೇಕು ಎಂದು ಅಗ್ರಹಿಸಿದರು.

ಭಾರತದ ಆರ್ಥಿಕತೆ ಸತ್ತಿದೆ ಎಂಬ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಬೆಂಬಲ ನೀಡಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಬಿ ಜೆ ಪಿ ನಾಯಕ ಭಾರತದ ಆರ್ಥಿಕತೆ ಸತ್ತಿರುವುದಿಲ್ಲ, ಸತ್ತಿರುವುದು ನಿಮ್ಮ ರಾಜಕೀಯ ಭವಿಷ್ಯ ಎಂದು ಕುಟುಕಿದರು.

ರಾಹುಲ್ ಗಾಂಧಿ ಹೇಳಿಕೆಯಿಂದ ಕೆರಳಿದ ಬಿಜೆಪಿಯ ನಾಯಕ ಡೊನಾಲ್ಡ್ ಟ್ರಂಪ್ ಅವರ ನಿಕ್ರಿಯ ಆರ್ಥಿಕತೆ ಎನ್ನುವ ಟೀಕೆಯನ್ನು ಸಮರ್ಥಿಸಿದ ರಾಹುಲ್ ಗಾಂಧಿ ಅತ್ಯಂತ ಕೆಳಮಟ್ಟಕ್ಕೆ ಇಳಿದ್ದಾರೆ. ಇದು ಭಾರತಿಯರ ಆಕಾಂಕ್ಷೆಗಳು, ಸಾದನೆಗಳು ಮತ್ತು ಭಾರತಿಯರ ಯೋಗಕ್ಷೇಮಕ್ಕೆ ಮಾಡಿದ ನಾಚಿಕೆಗೆಡಿನ ಅವಮಾನ ಎಂದು ದೂಶಿಸಿದರು. ಇದು ಸತ್ತ ಆರ್ಥಿಕತೆಯಲ್ಲ, ಊತ್ಕರ್ಸಿಸುತ್ತಿರುವ. ಭಾರತದ ಸ್ಥಿತಿಸ್ಥಾಪಕತ್ವ ಸ್ಥಿತಿ ಎಂದರು.

ಭಾರತದ ಆರ್ಥಿಕತೆಯನ್ನು ಯಾವಾಗಲು ಅತ್ಯಂತ ಕೀಳಾಗಿ ನೋಡುತ್ತಿರುವ ರಾಹುಲ್ ಗಾಂಧಿಯ ಪ್ರವೃತ್ತಿಯು ಉತ್ತಮ ಭವಿಷ್ಯ ನಿರ್ಮಿಸಲು ಪ್ರಯತ್ನಿಸುತ್ತಿರುವ 140 ಕೋಟಿ ಜನರಿಗೆ ನೇರ ಅವಮಾನ ಎಂದು ಆಕ್ಷಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ ಓಬಯ್ಯ ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading