
ಹಿರಿಯೂರು :
ನಗರಸಭೆಗೆ ಪೌರಕಾರ್ಮಿಕರ ನೇಮಕಾತಿ ಆಯ್ಕೆಯ ವಿಷಯದಲ್ಲಿ ಸ್ಥಳೀಯ ನಗರಸಭೆಯ ವ್ಯಾಪ್ತಿಯ ನಿವಾಸಿಗಳನ್ನೇ ಆಯ್ಕೆ ಮಾಡಬೇಕು, ಗ್ರಾಮಾಂತರ ನಿವಾಸಿಗಳನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು ಎಂಬುದಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ರಾಮಚಂದ್ರ ಒತ್ತಾಯಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಸಮಿತಿ ವತಿಯಿಂದ ನಗರಸಭೆಗೆ ಪೌರಕಾರ್ಮಿಕರ ನೇಮಕಾತಿ ಆಯ್ಕೆಯ ವಿಷಯದಲ್ಲಿ ಸ್ಥಳೀಯ ನಗರಸಭೆಯ ವ್ಯಾಪ್ತಿಯ ನಿವಾಸಿಗಳನ್ನೇ ಆಯ್ಕೆ ಮಾಡಬೇಕೆಂದು ಒತ್ತಾಯಿಸಿ, ನಗರಸಭೆ ವ್ಯವಸ್ಥಾಪಕಿ ಮಂಜುಳಾರವರಿಗೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ಒಂದು ವೇಳೆ ನಾವು ಕೊಟ್ಟಿರುವ ಮನವಿಯನ್ನು ನಿರ್ಲಕ್ಷಿಸಿ, ನೀವು ಸೂಕ್ಷ್ಮವಾಗಿ ಕಾನೂನು ರೀತಿ ಮುನಿಸಿಪಾಲ್ ಕಾಯ್ದೆ 1964ರ ಪ್ರಕಾರ ಆಯ್ಕೆಯನ್ನು ತಾವುಗಳು ಪರಿಗಣಿಸುವಾಗ ನಗರಸಭೆ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳನ್ನು ಹಾಗೂ ಕಾನೂನು ಬದ್ಧವಾಗಿ ಸರಿಯಾದ ರೀತಿಯಲ್ಲಿ ಪಾರದರ್ಶಕವಾಗಿ ನೇಮಕಾತಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ರಾಮಚಂದ್ರ, ಜಿಲ್ಲಾಧ್ಯಕ್ಷರಾದ ಆರ್.ರಾಘವೇಂದ್ರ, ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷರಾದ ಸಾಧಿಕ್, ತಾಲೂಕು ಅಧ್ಯಕ್ಷರಾದ ಶಿವರಾಜಕುಮಾರ್, ನೂತನ ತಾಲೂಕು ಗೌರವಾಧ್ಯಕ್ಷರಾದ ಆಟೋ ಓಬಣ್ಣ, ತಾಲೂಕು ಆಟೋ ಘಟಕ ಅಧ್ಯಕ್ಷರಾದ ವೈ.ರಮೇಶ್, ಸಂಘಟನಾ ಕಾರ್ಯದರ್ಶಿಯಾದ ಆಟೋ ರಂಗಸ್ವಾಮಿ, ತಾಲೂಕು ಕಾರ್ಯದರ್ಶಿಯಾದ ಕೆಂಚಣ್ಣ, ಆಟೋ ಧರ್ಮಪುರ ಹೋಬಳಿ ಅಧ್ಯಕ್ಷರಾದ ದಾಸಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.