
.ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಮಾದಿಗ ಸಮುದಾಯದ ಬಂಧುಗಳು ಮನೆ ಮನೆ ಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ಬರೆಯಿಸಿ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ ಪ್ರಕಾಶ್ ಮೂರ್ತಿ ಜಾಗೃತಿ ಮೂಡಿಸಿದರು
ಶುಕ್ರವಾರ ಹೋಬಳಿಯ ಗಿಡ್ಡಾಪುರ ಗಜ್ಜುಗಾನಹಳ್ಳಿ ತಿಮ್ಮಪ್ಪಯ್ಯನಹಳ್ಳಿ, ಮಲ್ಲೂರಹಳ್ಳಿ, ರೇಖಲಗೆರೆ ದಾಸರಮುತ್ತೇನಹಳ್ಳಿ ತೊರೆಕೊಲಮ್ಮನಹಳ್ಳಿ, ಗುಂತಕೊಲಮ್ಮನಹಳ್ಳಿ ಗ್ರಾಮಗಳ ಎ.ಕೆ ಕಾಲೋನಿಗಳಲ್ಲಿ ಭೇಟಿ ನೀಡಿ ಒಳ ಮೀಸಲಾತಿ ಸಮೀಕ್ಷೆ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಬಂಧುಗಳಲ್ಲಿ ಜಾತಿ ಕಾಲಂನಲ್ಲಿ ಮಾದಿಗ ಎಂದು ಬರಿಸಲು ಜಾಗೃತಿ ಮೂಡಿಸಿ ಮಾತನಾಡಿದ ಅವರು. ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸಲು ನಾಗಮೋಹನ್ ದಾಸ್ ಆಯೋಗ ರ್ಕಾರಕ್ಕೆ ಮಧ್ಯಂತರ ವರದಿ ನೀಡಿದ್ದು ಮೇ ೫ ರಿಂದ ೧೭ರ ವರೆಗೆ ನಡೆಯಲಿರುವ ಮನೆ ಮನೆ ಜಾತಿ ಸಮೀಕ್ಷೆಯಲ್ಲಿ ಹೋಬಳಿಯ ಪ್ರತಿ ಹಳ್ಳಿಗಳಲ್ಲಿ ಮಾದಿಗ ಬಂಧುಗಳು ಕಾಲಂ ನಂಬರ್ ೬೧ ರಲ್ಲಿ ಮಾದಿಗ ಎಂದು ಬರಿಸಬೇಕು ಎಂದರು.
ನೆಲಗೇತನಹಟ್ಟಿ ಕೆ.ಬಿ ನಾಗರಾಜ್ ಮಾತನಾಡಿದರು ಮಾದಿಗ ಸಮುದಾಯದ ಬಂದುಗಳು ಸುಮಾರು ೩೦ವರ್ಷಗಳ ಕಾಲ ಮೀಸಲಾತಿಗಾಗಿ ಹೋರಾಟ ಮಾಡಿದ್ದಾರೆ ಮೇ ೦೫ ರಿಂದ ಪ್ರಾರಂಭವಾಗುವ ಜಾತಿ ಸಮೀಕ್ಷೇಯಲ್ಲಿ ಪ್ರತಿ ಹಳ್ಳಿ ಯುವಕರು ವಿದ್ಯಾಥಿಗಳು ಗಣತಿದಾರರ ಜೊತೆಯಲ್ಲಿ ಇದ್ದು ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.
ಇನ್ನು ಇದೆ ವೇಳೆ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ, ಹಾಲಿ ಸದಸ್ಯ ಬಿ ಶಂಕರ್ ಸ್ವಾಮಿ ಮಾತಾನಾಡಿದರು ಸುಪ್ರೀಂ ಕೊರ್ಟ್ ಆದೇಶದಂತೆ ಅಯಾ ರಾಜ್ಯದ ಮುಖ್ಯ ಮಂತ್ರಿಗಳಿಗೆ ಆದೇಶವನ್ನ ನೀಡಿದೆ ರಾಜ್ಯ ಸರ್ಕಾರ ಜಾತಿ ಗಣತಿ ಸಮೀಕ್ಷೆಗೆ ಆದೇಶ ನೀಡಿದ್ದು ಮೇ ೦೫ ರಿಂದಾ ೧೭ ರ ವರೆಗೆ ನಡೆಯಲಿರುವ ಮನೆ ಮನೆ ಜಾತಿ ಸಮೀಕ್ಷೆ ಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಕಾಲಂನಲ್ಲಿ ಮಾದೀಗ ಎಂದು ಬರೆಸಬೇಕು ಎಂದರು ಇದೆ ಸಂದರ್ಬದಲ್ಲಿ ದಲಿತ ಮುಖಂಡರಾದ ಮರಿ ಪಾಲಯ್ಯ, ಅಬ್ಬೇನಹಳ್ಳಿ ನಾಗರಾಜ್, ಎತ್ತಿನಹಟ್ಟಿ ಓಬಳೇಶ್ ತಿಪ್ಪೇಸ್ವಾಮಿ, ನನ್ನಿವಾಳ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಸೇರಿದಂತೆ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.