.ವರದಿ. ಕೆ.ಟಿ.ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಕಲಾವಿದರ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ನಿವೃತ್ತ ಅಂಚೆ ನೌಕರ ಟಿ. ಜಯಣ್ಣ ಹೇಳಿದರು.

ಮಂಗಳವಾರ ರಾತ್ರಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ.ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಶ್ರೀ ಶಂಕರಸ್ವಾಮಿ ಧ್ವಜಾರೋಹಣ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಶಂಕರಸ್ವಾಮಿ ಕೃಪೋಷಿತ ನಾಟ್ಯ ಕಲಾ ಸಂಘ ವತಿಯಿಂದ
ಚದುರಿದ ಹೃದಯ ಚೂರಾಯಿತು
ಹುಚ್ಚ ಹುಡುಗನ ಪ್ರೀತಿ ಮೆಚ್ಚಿದ ಚೆಲುವೆ
ಎಂಬ ಸುಂದರ ಸಾಮಾಜಿಕ ನಾಟಕವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಹಬ್ಬ ಜಾತ್ರೆ ಸಮಯದಲ್ಲಿ ಮೊದಲಿನಿಂದಲೂ ಕಲೆಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಯುವ ಪೀಳಿಗೆ ಕಲೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು
ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ .ತಿಪ್ಪೇಸ್ವಾಮಿ (ಕೋಟೆಪ್ಪ) ಮಾತನಾಡಿದರು ಸಮಾಜದಲ್ಲಿ ನೆಡೆಯುವ ಘಟನೆಗಳನ್ನು ಮೆಲಕು ಹಾಕುವ ಸಾಮಾಜಿಕ ನಾಟಕ ಸಮಾಜದ ಅಭಿವೃದ್ಧಿ ಮತ್ತು ಏಳಿಗೆಗೆ ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿಯ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ. ಬಿ. ಮುದಿಯಪ್ಪ, ಎಸ್ . ಸಣ್ಣ ಕಾಮಯ್ಯ ರೈಲು ಇಲಾಖೆ ಗಿಡ್ಡಾಪುರ ,
ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಟಿ. ಎನ್ ಶೈಲಾ ಮಂಜಣ್ಣ, ಉಪಾಧ್ಯಕ್ಷ ಎಂ. ತಿಪ್ಪೇಸ್ವಾಮಿ ರಾಮಸಾಗರ, ಸದಸ್ಯರಾದ ಕೆ. ಎಸ್. ಮಂಜಣ್ಣ, ಪಾಲಮ್ಮ ಜಿ. ಬೋರಯ್ಯ,ಎಸ್ ಪ್ರೇಮಲತಾ ಟಿ ಶಂಕರ್ ಮೂರ್ತಿ, ರಾಧಮ್ಮ ಬೋಜರಾಜ್, ಬಸಕ್ಕ ತಿಪ್ಪೇಸ್ವಾಮಿ, ಡಿ. ರೇವಣ್ಣ, ಜಿ ಸೋಮಶೇಖರ್, ಟಿ, ಅಶೋಕ್, ಗೀತಮ್ಮ ಸಿ. ಕುಮಾರ್, ಲಕ್ಷ್ಮಿ ಮಹಾದೇವಣ್ಣ, ಮುಂಜಣ್ಣ, ತಿಮ್ಮಪ್ಪಯ್ಯನಹಳ್ಳಿ, ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಬೋರಯ್ಯ, ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಜಿ .ಎಸ್. ತಿಪ್ಪೇಸ್ವಾಮಿ, ರಾಮಸಾಗರ ಪಿ.ಪಿ. ಮಹಾಂತೇಶ್, ಸಣ್ಣತಿಪ್ಪಯ್ಯ, ಜಯಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ. ಬಿ ತಿಪ್ಪೇಸ್ವಾಮಿ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್, ಸೇರಿದಂತೆ ಸಮಸ್ತ ಗಜ್ಜುಗಾನಹಳ್ಳಿ ಗ್ರಾಮಸ್ಥರು ಇದ್ದರು,

About The Author
Discover more from JANADHWANI NEWS
Subscribe to get the latest posts sent to your email.