
ಚಳ್ಳಕೆರೆ ಮಾ.2.
ಶುಚಿ.ರುಚಿಯಾಗಿ ಪೌಷ್ಟಿಕ ಆಹಾರ ತಯಾರಿಸಿ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಸಮಾಜದಲ್ಲಿ ಸತ್ಪ್ರಜೆಯಾಗಿ ದೇಶದ ಆಸ್ತಿಯಾಗುತ್ತಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅಕ್ಷರದಾಸೋಹ. ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಬಿಸಿ ಯೂಟ ತಯಾರಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರಕಾರಿ ಹಾಗೂ ಅನುದಾನಿದ ಶಾಲೆಗಳಲ್ಲಿ 1ರಿಂದ 10 ನೇತರಗತಿಯವರೆಗೆ ವ್ಯಾಂಗ ಮಾಡುವ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಸರಕಾರ ಮಕ್ಕಳು ಹಸಿವು ಹಾಗೂ ಅಪೌಷ್ಠಿಕತೆಯಿಂದ ಬಳಲಬಾರದು ಎಂದು ಹಾಲು. ಮೊಟ್ಟೆ.ರಾಗಿ ಮಾಲ್ಟ್ . ಬಿಸಿಯೂಟ ನೀಡುತ್ತಿದ್ದು ಅಡುಗೆ ಮಾಡುವ ಸಿಬ್ಬಂದಿ ಅಡುಗೆ ಕೊಠಡಿ ಸ್ವಚ್ಚತೆ ಕಾಪಾಡುವ ಜತೆಗೆ ಶುಚಿ.ರುಚಿಯಾಗಿ ಅಡುಗೆ ತಯಾರಿಸಿ ಬಡಿಸುವಂತೆ ತಿಳಿಸಿದರು.
ಬಿಇಒ ಸುರೇಶ್. ಅಕ್ಷರದಾಸೋಹ ಸಹಸಯಕ ನಿರ್ದೇಶಕ ಮಂಜುನಾಥ್ ಮಾತನಾಡಿದರು. ಗ್ಯಾರೆಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ. ಗದ್ದಿಗೆ ತಿಪ್ಪೇಸ್ವಾಮಿ .ತಾಪಂ ಇಒ ಶಶಿಧರ್ .ಕರಿಯಣ್ಣ. ಶಿವರುದ್ರಪ್ಪ ಇತರರಿದ್ದರು.





About The Author
Discover more from JANADHWANI NEWS
Subscribe to get the latest posts sent to your email.