ನಾಯಕನಹಟ್ಟಿ:: ಕನ್ನಡವನ್ನು ಉಳಿಸಿ ಬೆಳೆಸಿದ ನಾಡಿನ ಮಹನೀಯರನ್ನು ಸ್ಮರಿಸಬೇಕು ಎಂದು ಚಳ್ಳಕೆರೆ ನಿವೃತ್ತ ತಹಶೀಲ್ದಾರ್ ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.




ಶನಿವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಮಾತನಾಡಿದ ಅವರು ಕನ್ನಡ ನಾಡಿನ ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು, ಕದಂಬರು, ಪಂಪ, ರನ್ನ, ಜನ್ಮ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಅನೇಕ ಮಹನೀಯರು ಕನ್ನಡ ನಾಡಿನ ಕನ್ನಡ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂಥವರನ್ನು ನಾವು ಸ್ಮರಿಸುವ ಕೆಲಸವಾಗಬೇಕು ಕನ್ನಡದ ಇತಿಹಾಸ, ಪರಂಪರೆ, ವೈಭವ, ಕನ್ನಡ ನಾಡಿಗೆ ಉಳಿಸೋಕೆ ಅತ್ಯಮೂಲ್ಯ ಕೊಡುಗೆ ಕೊಟ್ಟವರು ಪಂಪ ಎಂದು ಹೇಳಿದರು.ಕಾರ್ಯದರ್ಶಿ ಎಂ ವೈ ಟಿ ಸ್ವಾಮಿ ಮಾತನಾಡಿದರು. ಶಿಕ್ಷಕ ಬಸವರಾಜ್ ಬಿ ಕಾರ್ಯಕ್ರಮ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ರಾಜೇಂದ್ರ, ಶಶಿಧರ್, ತಿಪ್ಪೇಸ್ವಾಮಿ, ಉಪ ಪ್ರಾಂಶುಪಾಲರಾದ ಬಿ ಆರ್ ರಮೇಶ್, ಶಿಕ್ಷಕರಾದ ಎಂ. ಫಣೇಂದ್ರ ಕುಮಾರ್,ಬಿ. ಉಮೇಶ್, ಡಿ ಈರಣ್ಣ, ಎಸ್ ಆರ್ ವೀರೇಶ್, ಆರ್ ಬಸವರಾಜ್, ಬಿ.ಕೆ. ಮಾರುತಿ,ಕೆ. ಶಬೀರ್, ಡಿ, ತಿಮ್ಮರಾಜ್, ಸೇರಿದಂತೆ ಶಿಕ್ಷಕ -ಶಿಕ್ಷಕಿಯರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.