July 10, 2025
IMG-20250701-WA0128.jpg

ಚಳ್ಳಕೆರೆ ಜು.1

ಬಹುದಿನಗಳ ಬೇಡಿಯಾದ ಗ್ರಾಮೀಣ ರಸ್ತೆ ಇನ್ನೇನು ಅಭಿವೃದ್ಧಿ ಭಾಗ್ಯ ಕನಸಿಗೆ ಬಗ್ನ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಗ್ರಾಮದಿಂದ ತಳಕು ಹೋಬಳಿ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸುವಂತೆ ಅನೇಕ ಬಾರಿ ಪ್ರತಿ ಭಟನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು.
ಬಹುದಿನಗಳ ಬೇಡಿಯಂತೆ ಸುಮಾರು‌.3 ಕೋಟಿ ಡಾಂಬರ್ ರಸ್ತೆಗೆ ಮಂಜುರಾತಿಯಾಗಿ ಮಂಗಳವಾರ ರಸ್ತೆ ಕಾಮಗಾರಿಗೆ ಶಾಸಕ ಎನ್ .ವೈ.ಗೋಪಾಲಕೃಷ್ಣ ಗುದ್ದಲಿ ಪೂಜೆ ನೆರೆವೇರಿಸುತ್ತಾರೆ ಎನ್ನುವಷ್ಟರಲ್ಲೆ ಕಾಂಗ್ರೆಸ್ ಕಾರ್ಯಕರ್ತರ ಮುಸಿಕಿನ ಗುದ್ದಾಟದಲ್ಲಿ ಗುದ್ದಲಿ ಪೂಜೆಗೆ ಅಡ್ಡಿಯಾಗಿದ್ದು ರಸ್ತೆ ಕಾಮಗಾರಿಗೆ ಮಂಜುರಾತಿಯಾದ .3 ಕೋಟಿ ಅನುದಾನ ಎಲ್ಲಿ ವಾಪಾಸ್ ಹೋಗಿಯ್ತದೆಯೋ ಎಂಬ ಆತಂಕ ದೊಡ್ಡ ಉಳ್ಳಾರ್ತಿ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಮತ ಯಾನೆ ಪ್ರಚಾರಕ್ಕೆ ಸ್ಟಾರ್ ನಟ ಕಿಚ್ಚ ಸುದೀಪ್ ಸಹ ಇದೇ ರಸ್ತೆಯಲ್ಲಿದೆ ಮತದಾರರ ಬಳಿ ಮತಯಾಚನೆಗೆ ಬಂದಿದ್ದರು ಇದೇರಸ್ತೆಯಲ್ಲಿ ಜನಪ್ರತಿ ನಿಧಿಗಳು ಅಧಿಕಾರಿಗಳೂ ಸಹ ಕಿತ್ತುವಹೋದ ರಸ್ತೆ. ಜಾಲಿ ಮುಳಿನ ಗಿಡಗಳ ನಡುವೆ ಓಡಾಡಿದ್ದಾರೆ ಇಂತಹ ರಸ್ತೆ ಅಭಿವೃದ್ಧಿಗೆ ಸರಕಾರ  ಅನುದಾನ ಬಿಡುಗಡೆ ಗೊಳಿಸಿದ್ದರೂ ಸಹ ಕಾಂಗ್ರೆಸ್ ಕಾರ್ಯಕರ್ತರ ಮುಸುಕಿನ ಗುದ್ದಾಟಕ್ಕೆ
ಸರಕಾರ ಅಭಿವೃದ್ಧಿ ಕಾಮಗಾರಿಗೆ ಆಡಳಿತ ಪಕ್ಷದ  ಸರಕಾರದ ಕಾರ್ಯಕರ್ತರಿಂದಲೇ ಹಿನ್ನೆಡೆಯಾಗಿದ್ದು ಕೂಡಲೆ ಸಂಬಂಧ ಪಟ್ಟ ಅಧಿಕಾರಿ ಮಧ್ಯ ಪ್ರವೇಶ ಮಾಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವಂತೆ ಒತ್ತಾಯಿಸಿದ್ದಾರೆ.

ದೊಡ್ಡ ಉಳ್ಳಾರ್ತಿ ಗ್ರಾಮಸ್ಥರ ಆರೋಪ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading