March 16, 2026
IMG-20260201-WA0243.jpg

ಚಳ್ಳಕೆರೆ: ಮಡಿವಾಳ ಸಮುದಾಯವು ಕಾಯಕ ನಿಷ್ಠೆ ತೋರುವ ಸಮಾಜವಾಗಿದ್ದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ಮಡಿವಾಳ ಸಮಾಜವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಟಿ ರಘುಮೂರ್ತಿ ಅಭಿಪ್ರಾಯ ಪಟ್ಟರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರ ಜೊತೆ ಸೇರಿ ಅನುಭವ ಮಂಟಪದಲ್ಲಿ ಮಹಿಳೆಯರ ಏಳಿಗೆಗಾಗಿ ಹಾಗೂ ವಚನ ಸಾಹಿತ್ಯ ಸೇರಿದಂತೆ ಹಲವು ಮಹತ್ವದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರಿದಂತಹ ಮಹಾನ್ ಮಾನವತಾವಾದಿಯಾಗಿದ್ದರು ಮಡಿವಾಳ ಸಮುದಾಯವು ತಾನು ಮೈಲಿಗೆಯಾಗಿ ಬೇರೆಯವರ ಮನಸ್ಸು ಮತ್ತು ವಸ್ತ್ರವನ್ನು ಶುಭ್ರಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮಡಿವಾಳ ಸಮಾಜವು ಪ್ರಗತಿ ಸಾಧಿಸಬೇಕಿದೆ ಎಂದು ತಿಳಿಸಿದರು.

ಹಾಸ್ಟೆಲ್ ಅಭಿವೃದ್ಧಿಗೆ ಕ್ರಮ: ನಗರದ ಬಳ್ಳಾರಿ ರಸ್ತೆಯಲ್ಲಿರುವ ಮಡಿವಾಳರ ವಿದ್ಯಾರ್ಥಿ ನಿಲಯ ಹಾಳಾಗಿರುವ ಬಗ್ಗೆ ಮುಖಂಡ ಎಂ ಎನ್ ಮೃತ್ಯುಂಜಯ ಶಾಸಕರ ಗಮನ ಸೆಳೆದಾಗ ವಿದ್ಯಾರ್ಥಿ ನಿಲಯದ ಬಗ್ಗೆ ಮುಖಂಡರಿಂದ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿ ನಿಲಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ಸಮಾಜದ ಅಧ್ಯಕ್ಷ ಎಂ ನಾಗರಾಜ್ ಮಾತನಾಡಿ

ನಮ್ಮ ಸಮುದಾಯವು ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮನಸ್ತಾಪಗಳನ್ನು ಮರೆತು ಎಲ್ಲರೂ ಒಂದುಗೂಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಿಳಿಸಿದರು. ಮುಖಂಡ ಮಂಜುನಾಥ್ ಮಾತನಾಡಿದರು

ಕಾರ್ಯಕ್ರಮಕ್ಕೆ ಶಾಸಕರು ತಡವಾಗಿ ಆಗಮನ: ಶಾಸಕ ಟಿ. ರಘುಮೂರ್ತಿ ಕಾರ್ಯಕ್ರಮದ ನಿಗದಿಯಂತೆ 12 ಗಂಟೆಗೆ ಆಗಮಿಸಬೇಕಾಗಿತ್ತು. ಆದರೆ ಮಧ್ಯಾಹ್ನ 2:30 ಆದರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ ಇದರಿಂದ ಕೆಆರ್‌ಎಸ್ ಪಕ್ಷದ ಮುಖಂಡ ನಗರಗೆರೆ ಮಹೇಶ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಸಮಾಜದ ಸಂಘಟನೆಯ ಪದಾಧಿಕಾರಿಗಳ ಜೊತೆ ಕಾರ್ಯಕ್ರಮಕ್ಕೆ ಬಂದ ಜನರು ವಾಪಸ್ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ತಾವೇ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸೋಣ ಎಂಬ ಕೂಗು ಸಹ ಕೇಳಿ ಬಂದಿತ್ತು ತಹಸಿಲ್ದಾರ್ ಹಾಗೂ ಸಮಾಜದ ಮುಖಂಡರು ಆಕ್ರೋಷಿತರನ್ನು ಸಮಾಧಾನಗೊಳಿಸಿ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಿದರು ಶಾಸಕ ಟಿ ರಘುಮೂರ್ತಿ ಕಾರ್ಯಕ್ರಮಕ್ಕೆ ತಡವಾಗಿ ಬಂದದ್ದಕ್ಕೆ ಕಾರಣವನ್ನು ಹೇಳಿ ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಕುರಿತು ಸಂಜೀವಿನಿ ಲ್ಯಾಬ್ ಎಂಎನ್ ಮೃತ್ಯುಂಜಯ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ರೇಹಾನ್ ಪಾಷಾ,, ಗದ್ದಿಗೆ ತಿಪ್ಪೇಸ್ವಾಮಿ ಪೌರಾಯುಕ್ತ ಜಗರೆಡ್ಡಿ ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ರೈತ ಮುಖಂಡರಾದ ಶಿವಲಿಂಗಪ್ಪ ಸಮಾಜದ ಮುಖಂಡರಾದ ಮಂಜುನಾಥ್ ,ಕರಿಕೆರೆ ನಾಗರಾಜ್ ಕುಶಾಲಪ್ಪ ಮಾಲತೇಶ್ ನಗರಗೆರೆ ಮಹೇಶ್ ಮಾಚಿಪ್ರಭು ವೀರಣ್ಣ ಪಗಡಲ ಬಂಡೆ ನಾಗೇಂದ್ರಪ್ಪ ಜೀವನ್ ಬೆಳೆಗೆರೆ ರಾಘು ಸೋಮಣ್ಣ ಓಂಕಾರಪ್ಪ ವಿಜಯ್ ರಂಗಸ್ವಾಮಿ ರಂಗಪ್ಪ ಮೃತ್ಯುಂಜಯ ಬಸವರಾಜ್ ಮಂಜಣ್ಣ ಪಿ ಸಿ ಶೈಲಜಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading