ಚಳ್ಳಕೆರೆ ಫೆ.1
ಸರಕಾರಿ ಅಧಿಕಾರಿಯೊಬ್ಬರ ಲಂಚದ ಬಗ್ಗೆ ವಿಳಾಸವಿಲ್ಲದ ವಾರ ಪತ್ರಿಕೆಯ ಹೆಸರಿನ ವ್ಯಕ್ತಿಯೊಬ್ಬರು ಜನಧ್ವನಿ ಡಿಜಿಟಲ್ ಮೀಡಿಯಾ ಕಚೇರಿಗೆ ಶುಕ್ರವಾರ ಪತ್ರವೊಂದು ಬಂದಿದೆ.
ಅನಾಮದೇಯ ಅಂಚೆ ಪತ್ರದ ಲಕೋಟಿ ಮೇಲೆಯೂ ದೂರುದಾರನ ವಿಳಾಸ ಮೊಬೈಲ್ ನಂಬರ್ ಇಲ್ಲದ ಪತ್ರವನ್ನು ಬಿಚ್ಚಿ ನೋಡಿದಾಗ ಸರಕಾರದ ಮುಖ್ಯ ಕಾರ್ಯದರ್ಶಿ ಬೆಂ. ಖಜಾನೆ ಆಯುಕ್ತರು ಬೆಂ. ಶಾಸಕ ಟಿ.ರಘುಮೂರ್ತಿ ಹಾಗೂ ವಾಸುದೇವರಾವ್ ಚಿತ್ರದುರ್ಗ ಲೋಕಾಯುಕ್ತ ಕಚೇರಿಗೆ ಶಿವಣ್ಣ ಮದಕರಿನಾಯಕ ಸಂಪಾದರ ಹೆಸರಿನಲ್ಲಿ ಅನಾಮದೇಯ ದೂರು ನೀಡಿದ್ದರಿಂದ ಶನಿವಾರ ರಮೇಶ್ ಉಪನಿರ್ದೇಶಕರು ಖಜಾನೆ ಇಲಾಖೆ ಚಿತ್ರದುರ್ಗ ಇವರು ಚಳ್ಳಕೆರೆ ಉಪಖನಾನೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಿಂದಲೂ ಸಹ ಮಾಹಿತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ನೌಕರರ ಸಂಘ ಅಧ್ಯಕ್ಷ ಸಿ.ಟಿ.ವೀರೇಶ್ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮಾತನಾಡಿ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಬರುವ ಅನಾಮಧೇಯ ದೂರುಗಳ ಬಗ್ಗೆ ಕ್ರಮಕೈಗೊಳ್ಳುವಂತಿಲ್ಲ. ಪೂರ್ಣ ವಿಳಾಸ, ದಾಖಲೆ ಇದ್ದರೆ ಮಾತ್ರ ತನಿಖೆ ನಡೆಸುವಂತೆ ಸರ್ಕಾರ ಈಗಾಗಲೆ ಸುತ್ತೋಲೆಯೂ ಹೊರಡಿಸಿದೆ.
ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹ ಪೀಡಿತವಾಗಿರುತ್ತವೆ. ಅಲ್ಲದೇ ದೂರುಗಳಿಗೆ ಪೂರಕವಾದ ಮಾಹಿತಿ, ದಾಖಲೆಗಳನ್ನು ಸಾಮಾನ್ಯವಾಗಿ ಲಗತ್ತಿಸಿರುವುದಿಲ್ಲ. ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ, ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುವುದಲ್ಲದೇ ದಕ್ಷ ಮತ್ತು ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅವರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಮುಂದೆಯಾದರೂ ಇಂತಹ ಅನಾಮದೇಯ ದೂರು ಪತ್ರಗಳಿಗೆ ಮಾನ್ಯತೆ ನೀಡ ಬಾರದು ಎಂದು ವಿವಿಧ ಇಲಾಖೆಯ ಸರಕಾರಿ ಹಾಗೂ ಅನುದಾನಿತ ಶಾಲೆ ಸೇರಿದಂತೆ ವಿವಿಧ ಇಲಾಖೆಯ ನೌಕರರು ಜಿಲ್ಲಾ ಖಜಾನೆ ಉಪನಿರ್ದೇಶಕರಿಗೆ ಮನವಿ ನೀಡಿದ್ದಾರೆ.




About The Author
Discover more from JANADHWANI NEWS
Subscribe to get the latest posts sent to your email.